ಬಹರೈನ್: ‘ಎಕ್ಸೆಲೊನ್ ಸೊಲ್ಯೂಷನ್ಸ್’ ಸಂಸ್ಥೆಯಿಂದ ಇಫ್ತಾರ್ ಕೂಟ
ಬಹರೈನ್, ಜೂ.19: ಇಲ್ಲಿನ ‘ಸಾರ ಸಮೂಹ ಸಂಸ್ಥೆ’ಯ ಸ್ವಾಮ್ಯತೆಯಲ್ಲಿರುವ ‘ಎಕ್ಸೆಲೊನ್ ಸೊಲ್ಯೂಷನ್ಸ್’ ಸಂಸ್ಥೆಯ ವತಿಯಿಂದ ರಮಝಾನ್ ಇಫ್ತಾರ್ ಕೂಟವು ಗುರುವಾರ ಝುಫೆರ್ನ ಓಲಿವ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಆಹ್ವಾನಿತ ಅತಿಥಿಗಳಿಗಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು.
‘ಸಾರ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮುಹಮ್ಮದ್ ಮನ್ಸೂರ್ ಅತಿಥಿಗಳನ್ನು ಬರ ಮಾಡಿಕೊಂಡರು. ಇಫ್ತಾರ್ ಅಂಗವಾಗಿ ಬಳಿಕ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತು. ಇದೇ ಸಂದರ್ಭ ‘ಉಪವಾಸದ ಮಹತ್ವ’ದ ಬಗ್ಗೆ ಉಪನ್ಯಾಸವನ್ನು ಕೂಡ ಏರ್ಪಡಿಸಲಾಗಿತ್ತು.
ಇಫ್ತಾರ್ ಕೂಟದಲ್ಲಿ ಭಾರತೀಯ ಉದ್ಯಮಿ ವಿ.ಕೆ.ಎಲ್ ಹಾಗೂ ಅಲ್ ನಮಲ್ ಸಮೂಹ ಸಂಸ್ಥೆಯ ಅಧ್ಯಕ್ಷ ವರ್ಗೀಸ್ ಕುರಿಯನ್, ಕಿಂಗ್ಡಮ್ ಯುನಿವರ್ಸಿಟಿ ಇದರ ಅಧ್ಯಕ್ಷ ಡಾ.ಯೂಸುಫ್ ಅಬ್ದುಲ್ ಗಫ್ಫಾರ್, ಕನ್ನಡ ಸಂಘದಅಧ್ಯಕ್ಷ ಪ್ರದೀಪ್ ಶೆಟ್ಟಿ, ಆಸ್ಟಿನ್, ಸಂತೋಷ್, ಅಮರನಾಥ ರೈ, ಕಮಲಾಕ್ಷ ಅಮೀನ್, ಕೃಷ್ಣ ಶೆಟ್ಟಿ, ಸಂತೋಷ್ ಕರ್ಕೇರ, ಶಿವಕುಮಾರ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಮುಹಮ್ಮದ್ ಮನ್ಸೂರ್, ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರಿಗೂ ವಂದಿಸಿದರು.
‘ಎಕ್ಸೆಲೊನ್ ಸೊಲ್ಯೂಷನ್ಸ್’ ಸಂಸ್ಥೆಯು ತೈಲ ರಫ್ತು, ಮಾಹಿತಿ ತಂತ್ರಜ್ಞಾನ, ತ್ಯಾಜ್ಯ ವಸ್ತುಗಳ ವಿಲೇವಾರಿ, ವೈದ್ಯಕೀಯ ಕ್ಷೇತ್ರ, ಮನೋರಂಜನಾ ಕ್ಷೇತ್ರ ಮುಂತಾದವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.