ದಾರುನ್ನೂರ್ ಅಲ್ ಕಿಸೈಸ್ ಶಾಖೆಯ ವಾರ್ಷಿಕ ಸಭೆ; ನೂತನ ಸಮಿತಿ ರಚನೆ
ದುಬೈ, ಅ. 14: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿ ರುವ ಅಲ್ ಕಿಸೈಸ್ ಶಾಖೆಯ ಮೂರನೆ ವಾರ್ಷಿಕ ಸಭೆಯು ಕಿಸೈಸ್ ನಲ್ಲಿರುವ ಸಮಿತಿಯ ಅಧ್ಯಕ್ಷ ಹನೀಫ್ ಕೆ.ಪಿ. ಮೂಡುಬಿದಿರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅವಲೋಕನ ಸಮಿತಿ ಪ್ರಮುಖರಾದ ಬದ್ರುದ್ದೀನ್ ಹೆಂತಾರ್ ಮತ್ತು ಅಬ್ದುಲ್ ಸಲಾಂ ಬಪ್ಪಳಿಗೆ ಈ ಸಂದರ್ಭ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂಶುದ್ದೀನ್ ಅಬ್ದುಲ್ ಹಮೀದ್ ಮೂಡುಬಿದಿರೆ ಸ್ವಾಗತಿಸಿದರು. ಅಬ್ದುಲ್ ಸಲಾಂ ಬಪ್ಪಳಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ವಾರ್ಷಿಕ ವರದಿ ಮತ್ತು ಕಾರ್ಯ ಚಟುವಟಿಕೆಗಳ ವಿವರವನ್ನು ಪ್ರಧಾನ ಕಾರ್ಯದರ್ಶಿ ಸಮೀರ್ ಇಬ್ರಾಹಿಂ ಕಲ್ಲರೆ ನೀಡಿದರು. ಈ ಸಂದರ್ಭ ಕಿಸೈಸ್ ಶಾಖೆಯು ದಾರುನ್ನೂರ್ ರಾಷ್ಟ್ರೀಯ ಸಮಿತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷ ಹನೀಫ್ ಕೆ.ಪಿ. ಮೂಡುಬಿದಿರೆ, ದಾರುನ್ನೂರ್ ಕಿಸೈಸ್ ಶಾಖೆಯು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದ್ದು ಕಳೆದ ಮೂರು ವರ್ಷಗಳಿಂದ ತಮ್ಮಿಂದಾದ ಅಳಿಲು ಸೇವೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ನೂತನ ಸಮಿತಿ ರಚನೆಯ ಜವಾಬ್ಧಾರಿಯನ್ನು ಬದ್ರುದ್ದೀನ್ ಹೆಂತಾರ್ ವಹಿಸಿಕೊಂಡರು.
ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಎನ್.ಎಂ ಪುತ್ತೂರು, ಅಧ್ಯಕ್ಷರಾಗಿ ಹನೀಫ್ ಕೆ.ಪಿ ಮೂಡುಬಿದಿರೆ, ಉಪಾಧ್ಯಕ್ಷರಾಗಿ ಮುಹಿಯುದ್ದೀನ್ ಮೂಡುಬಿದಿರೆ, ಸತ್ತಾರ್ ಪನಿಯೂರ್, ನವಾಝ್ ಕೋಟೆಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್ ಹಮೀದ್ ಮೂಡುಬಿದಿರೆ, ಕಾರ್ಯದರ್ಶಿಯಾಗಿ ಇಕ್ಬಾಲ್ ಮಣಿಪುರ ಉಡುಪಿ, ಕಬೀರ್ ಮೂಡುಬಿದಿರೆ, ಕೋಶಾಧಿಕಾರಿಯಾಗಿ ಇಫ್ತಿಕಾನ್ ಸಾಸ್ತಾನ, ಸಂಘಟನ ಕಾರ್ಯದರ್ಶಿಯಾಗಿ ಸಮೀರ್ ಇಬ್ರಾಹಿಂ ಕಲ್ಲರೆ,
ಕನ್ವೀನರ್ ಗಳಾಗಿ ಸಂಶೀರ್ ಮೂಡುಬಿದಿರೆ, ಅನ್ಸಾರ್ ಮೂಡುಬಿದಿರೆ, ಇಬ್ರಾಹಿಂ ಕಲ್ಲುಗುಂಡಿ, ಆರಿಫ್ ಕೆ.ಸಿ.ರೋಡ್, ಅನ್ಸಾರ್ ಕೆ.ಪಿ. ಮೂಡುಬಿದಿರೆ,
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಲೀಂ ಕೆ.ಸಿ ರೋಡ್, ಮುಸ್ತಫಾ ಸಾಣೂರ್, ಆಲಂ ಬಿಹಾರ್ , ಶಾನವಾಝ್ ಹೈದ್ರಾಬಾದ್ , ಶೆಝಾದ್ ಹೈದರಾಬಾದ್, ಅರಾಫತ್ ಕೆ.ಸಿ ರೋಡ್, ಶರೀಫ್ ಸುಳ್ಯ, ಸಮೀರ್ ಪಡೀಲ್, ಮಮ್ಮದ್ ಮೂಸಾ ಕೆ.ಸಿ ರೋಡ್, ಇರ್ಶಾದ್ ತುಮಕೂರು, ಮುಸ್ತಕೀಮ್ ಹೈದರಾಬಾದ್, ತೈಸೀಮ್ ಹೈದರಾಬಾದ್, ಜಾಫರ್ ಕಣ್ಣೂರ್, ಉಮ್ಮರ್ ಕಣ್ಣೂರ್, ಯೂನುಸ್ ಮಲಪ್ಪುರಮ್, ಜುಬೈರ್ ಸಾಸ್ತಾನ ಅವರುಗಳನ್ನು ಆಯ್ಕೆ ಮಾಡಲಾಯಿತು.
ಇಫ್ತಿಕಾನ್ ಸಾಸ್ತಾನ ಕಾರ್ಯಕ್ರಮ ನಿರೂಪಿಸಿದರು.