ಡಿ.24-26: ಮಂಗಳೂರಿನಲ್ಲಿ ಸಿಪಿಐ ಜಿಲ್ಲಾ ಸಮ್ಮೇಳನ
ಮಂಗಳೂರು, ಅ. 28: ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಅಖಿಲ ಭಾರತ ಮಹಾಧಿವೇಶನವು ಮುಂದಿನ ಎಪ್ರಿಲ್ ತಿಂಗಳಿನಲ್ಲಿ ಕೇರಳದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಅಧಿವೇಶನ ದಾವಣಗೆರೆಯಲ್ಲಿ ಬರುವ ಜನವರಿಯಲ್ಲಿ ಜರಗಲಿದ್ದು, ಇದಕ್ಕೆ ಪೂರ್ವಭಾಯಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಡಿಸೆಂಬರ್ 24 ರಿಂದ 26ರವರೆಗೆ ನಗರದಲ್ಲಿ ಸಂಪನ್ನಗೊಳ್ಳಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಕಾಮ್ರೇಡ್ ಬಿ.ವಿ. ಕಕ್ಕಿಲ್ಲಾಯ ಭವನದ ಕಾ.ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಕೆ. ವಿ. ಭಟ್ ವಹಿಸಿದ್ದರು. ಎಚ್.ವಿ . ರಾವ್, ಸುರೇಶ್ ಕುಮಾರ್, ಬಿ. ಶೇಖರ್ ಮಾತನಾಡಿದರು. ವಿ.ಎಸ್. ಬೇರಿಂಜ ಸ್ವಾಗತಿಸಿ, ಎಂ. ಕರುಣಾಕರ್ ವಂದಿಸಿದರು.
ಸಮ್ಮೇಳನದ ಯಶಸ್ವಿಗಾಗಿ ಸಿದ್ಧತಾ ಸಮಿತಿಯನ್ನು ಶನಿವಾರ ನಡೆದ ಸಭೆಯಲ್ಲಿ ರಚಿಸಲಾಯಿತು. ಖ್ಯಾತ ವೈದ್ಯ ಡಾ. ಬಿ. ಶ್ರೀನಿವಾಸ್ ಕಕ್ಕಿಲ್ಲಾಯರನ್ನು ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ವಿ. ಕುಕ್ಯಾನ್, ಕೋಶಾಧಿಕಾರಿಯಾಗಿ ಎ. ಪ್ರಭಾಕರ್ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಕೆಲವೊಂದು ಮುಖ್ಯ ಉಪ ಸಮಿತಿಗಳನ್ನು ರಚಿಸಲಾಯಿತು.