ಮೂಡುಬಿದಿರೆ: ನ್ಯೂಜೆರ್ಸಿಯಲ್ಲಿನ ಕೃಷ್ಣ ವೃಂದಾವನ ಕಾಷ್ಠಶಿಲ್ಪಕ್ಕೆ ಮುಹೂರ್ತ
ಉಡುಪಿ ಪುತ್ತಿಗೆ ಮಠದ ವತಿಯಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಐದು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೃಷ್ಣ ವೃಂದಾವನದ ಕಾಷ್ಠಶಿಲ್ಪಕ್ಕೆ ಮೂಡುಬಿದಿರೆ ಸಂಪಿಗೆಯಲ್ಲಿರುವ ಎಸ್.ಕೆ ಕಾಷ್ಠಶಿಲ್ಪ ಕೇಂದ್ರದಲ್ಲಿ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಪ್ರಾರ್ಥನೆ ನೆರವೇರಿಸುವ ಮೂಲಕ ಗುರುವಾರ ಮುಹೂರ್ತ ನೆರವೇರಿಸಿದರು. ಅವಿಭಜಿತ ದ.ಕ ಜಿಲ್ಲೆಯ ಪ್ರಖ್ಯಾತ ಕಾಷ್ಠಶಿಲ್ಪಿ ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಹರೀಶ್ ಆಚಾರ್ಯರ ನೇತೃತ್ವದಲ್ಲಿ ನುರಿತ ಕಾಷ್ಠಶಿಲ್ಪಿಗಳಿಂದ ದ.ಕ ಜಿಲ್ಲೆಯ ದೇವಾಲಯಗಳ ಮಾದರಿಯಲ್ಲಿ ಪಂಚಾಂಗವನ್ನು ಹೊರತು ಪಡಿಸಿ ಸಂಪೂರ್ಣ ಕಾಷ್ಠಶಿಲ್ಪದಿಂದ ಈ ದೇವಾಲಯ ನಿರ್ಮಾಣವಾಗಲಿದೆ.
Next Story