ಮಂಗಳೂರಿನಲ್ಲಿ 'ಕ್ಲೀನ್ ಮಂಗಳೂರು' ಪರಿಸರ ಸ್ವಚ್ಚತಾ ಅಭಿಯಾನ
ಮಂಗಳೂರು, ನ. 20: ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ 'ಕ್ಲೀನ್ ಮಂಗಳೂರು' ಹೆಸರಿನಲ್ಲಿ ಮಂಗಳೂರಿನ ಅಸುಪಾಸಿನಲ್ಲಿ ಪರಿಸರ ಸ್ವಚ್ಚತಾ ಅಭಿಯಾನವು ಇಂದು ನಡೆಯಿತು.
ಮಂಗಳೂರು ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪೇಸ್ ನೆಕ್ಸ್ಟ್ ಸಂಸ್ಥೆ, ರಾಮಕೃಷ್ಣ ಮಿಷನ್ ಹಾಗೂ ಎಪಿಡಿ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ನಡೆದ ಈ ಸ್ವಚ್ಚತಾ ಅಭಿಯಾನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಪಿ.ಎ.ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್, ಪಿ.ಎ. ಕಾಲೇಜಿನ ಎಂಬಿಎ ಡೈರೆಕ್ಟರ್ ಡಾ.ಬೀರನ್ ಮೊಯ್ದಿನ್, ಪಿ.ಎ.ಕಾಲೇಜಿನ ಸಿವಿಲ್ ವಿಭಾಗ ಮುಖ್ಯಸ್ಥ ಡಾ. ಪಾಲಾಕ್ಷಪ್ಪ , ಪಿ.ಎ.ಕಾಲೇಜಿನ ಪ್ರಾದ್ಯಾಪಕರಾದ ಪ್ರೊಪೆಸರ್ ಹಬೀಬುರ್ರಹ್ಮಾನ್, ಪೇಸ್ ನೆಕ್ಟ್ ಸಂಸ್ಥೆಯ ಅಧ್ಯಕ್ಷರಾದ ಹನೀಫ್, ಎಪಿಡಿ ಸಂಸ್ಥೆಯ ಆ್ಯಂಟಿ ಪೊಲ್ಯುಷನ್ ಡ್ರೈವ್'ನ ರುಹಿಯ ಹುಸೈನ್ ಹಾಗೂ ಅಬ್ದುಲ್ಲಾ ರೆಹ್ಮಾನ್ ಸ್ವಚ್ಚತಾ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಗರದ ಸ್ಟೇಟ್ ಬ್ಯಾಂಕ್ ಪರಿಸರವನ್ನು ಸ್ವಚ್ಚಗೊಳಿಸಲಾಯಿತು.