ಡಿ.8: ಬೆಳ್ತಂಗಡಿಯಲ್ಲಿ ಗ್ರ್ಯಾಂಡ್ ಮೀಲಾದ್ ರ್ಯಾಲಿ
ಬೆಳ್ತಂಗಡಿ, ಡಿ.7: ಗೇರುಕಟ್ಟೆಯ ಮನ್ಶರ್ ಸಖಾಫತುಲ್ ಇಸ್ಲಾಮಿಯದ ವತಿಯಿಂದ ಡಿ.8ರಂದು 2 ಗಂಟೆಗೆ ಬೆಳ್ತಂಗಡಿ ಚರ್ಚ್ ಬಳಿಯಿಂದ ಅಂಬೇಡ್ಕರ್ ಭವನದ ತನಕ ಗ್ರ್ಯಾಂಡ್ ಮೀಲಾದ್ ರ್ಯಾಲಿ ನಡೆಯಲಿದೆ. ಮನ್ಶರ್ ಸಖಾಫತುಲ್ ಇಸ್ಲಾಮಿಯದ ಅಧ್ಯಕ್ಷ ಸೈಯದ್ ಉಮರ್ ಅಸ್ಸಖಾಫ್ ತಂಙಳ್ ಗೇರುಕಟ್ಟೆ ರ್ಯಾಲಿಗೆ ಚಾಲನೆ ನೀಡುವರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸುಫಿಯಾನ್ ಸಖಾಫಿ ಕಾವಲ್ಕಟ್ಟೆ, ಮದ್ಹುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ ಎಂದು ಸಂಸ್ಥೆಯ ಪಿ.ಆರ್.ಒ. ಮುಹಮ್ಮದ್ ಕಲಂದರ್ ಪದ್ಮುಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story