ಅಶಾಂತಿ ಸೃಷ್ಟಿ: ರಕ್ಷಣೆ ನೀಡಲು ಮುಸ್ಲಿಂ ಲೀಗ್ ಮನವಿ
ಮಂಗಳೂರು, ಡಿ.13: ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಕಾರವಾರ ಸಹಿತ ವಿವಿಧ ಕಡೆ ಸಂಘ ಪರಿವಾರವು ಅಶಾಂತಿ ಸೃಷ್ಟಿಸುತ್ತಿದ್ದು, ಇದರಿಂದ ಮುಸ್ಲಿಮರು ಆತಂಕದ ಕ್ಷಣಗಳನ್ನು ಕಳೆಯುವಂತಾಗಿದೆ. ಹಾಗಾಗಿ ಮುಸ್ಲಿಮರಿಗೆ ರಕ್ಷಣೆ ನೀಡುವುದರೊಂದಿಗೆ ಆಸ್ತಿಪಾಸ್ತಿ ನಷ್ಟಗೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಮುಸ್ಲಿಂ ಲೀಗ್ ಮುಖಂಡರಾದ ಸಿ.ಅಹ್ಮದ್ ಜಮಾಲ್, ಹಾಜಿ ಎಂ. ಅಬ್ದುಲ್ ರಹ್ಮಾನ್, ಮುಹಮ್ಮದ್ ಇಸ್ಮಾಯೀಲ್, ಜಮಾಲ್ ಉಳ್ಳಾಲ್, ಎಂ.ಕೆ. ಅಶ್ರಫ್ ಬೆಂಗರೆ, ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
Next Story