ಶಂಕರನಾರಾಯಣ, ಡಿ.13: ಬಾಂಡ್ಯದ ಕೊಡ್ಲಾಡಿ ಚೇಣ್ಕೊಡ್ಲು ನಿವಾಸಿ ನಾರಾಯಣ ಆಚಾರ್ಯ ಎಂಬವರ ಪುತ್ರಿ ದಿವ್ಯಾ(23) ಇಂದು ಬೆಳಗ್ಗೆ ಮನೆಯಿಂದ ಹೊರಗೆ ಹೋದವಳು ಹಿಂದಿರುಗಿ ಬಾರದೇ ನಾಪತ್ತೆಯಾಗಿ ರುವುದಾಗಿ ತಂದೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.