ಡಿ.17: ಮಾಸ್ತಿಕಟ್ಟೆಯಲ್ಲಿ ಬುರ್ದಾ ಮಜ್ಲಿಸ್
ಮಂಗಳೂರು, ಡಿ.14: ಉಳ್ಳಾಲ ಮಾಸ್ತಿಕಟ್ಟೆಯ ಆಝಾದ್ ನಗರದ ಆಝಾದ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಉಳ್ಳಾಲ ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಮತ್ತು ಸನ್ಮಾನ ಕಾರ್ಯಕ್ರಮವು ಡಿ.17ರಂದು ಮಗ್ರಿಬ್ ನಮಾಝ್ ಬಳಿಕ ಮಾಸ್ತಿಕಟ್ಟೆಯ ಮರ್ಹೂಂ ಮುಹಮ್ಮದ್ ಸಲೀತ್ ವೇದಿಕೆಯಲ್ಲಿ ಜರಗಲಿದೆ.
ಅಸೈಯದ್ ಹಾಮಿದ್ ಇಂಬಿಚ್ಚಿಕೋಯ ತಂಙಲ್ ಅಲ್ ಬುಖಾರಿ ದುಆ ಮಾಡಲಿದ್ದು, ಶೈಖುನಾ ಅಹ್ಮದ್ ಬಾವಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಸಚಿವ ಯ.ಟಿ.ಖಾದರ್ರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story