ಡಿ. 17: ಕೊಲ್ಲರಕೋಡಿ ಹಳೆ ವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬ
ನರಿಂಗಾನ, ಡಿ.16: ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕೊಲ್ಲರಕೋಡಿ ಹಳೆ ವಿದ್ಯಾರ್ಥಿ ಸಂಘ ಇದರ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮವು ಡಿ. 17 ರಂದು ಸಂಜೆ 7 ಗಂಟೆಗೆ ಕೊಲ್ಲರಕೋಡಿ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಆಹಾರ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಿದ್ದೀಖ್ ಪಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಚಂದ್ರಹಾಸ್ ಕರ್ಕೇರ, ಮಮತಾ ಗಟ್ಟಿ, ಜಾವೀದ್ ಯೆನೆಪೊಯ, ನಿತೀನ್ ಜೆ. ಶೆಟ್ಟಿ, ಮುಸ್ತಫಾ ಎಸ್.ಎಮ್, ಪ್ರಶಾಂತ್ ಕಾಜವ, ಸಂತೋಷ್ ಕುಮಾರ್ ರೈ, , ಇಸ್ಮಾಯಿಲ್ ಮೀನಂಕೋಡಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬ್ದುಲ್ ರವೂಫ್ ಪುತ್ತಿಗೆ, ಅಶೋಕ್, ಪ್ರೇಮಾನಂದ ರೈ, ಮೊದಲಾದವರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಸ್ಮೈಲ್ ಇವೆಂಟ್ಸ್ ಕಾಸರಗೋಡ್ ಅವರಿಂದ ಸಂಗೀತ ರಸಮಂಜರಿ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಮಾಧ್ಯಮ ಕಾರ್ಯದರ್ಶಿ ನೌಫಲ್ ಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story