ಕಲ್ಯಾಣಪುರ ಶಾಲೆಯ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆ
ಉಡುಪಿ, ಡಿ.16: ಕಲ್ಯಾಣಪುರ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ರಜತ ಮಹೋತ್ಸವದ ವರ್ಷದ ಪ್ರಯುಕ್ತ ಶಾಲಾ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ನೆರವೇರಿಸಿದರು.
ಬಳಿಕ ಕಲ್ಯಾಣಪುರ ಮಿಲಾಗ್ರಿಸ್ ಟ್ರೈಸೆಂಟಿನರಿ ಸಭಾಭವನದಲ್ಲಿ ನಡೆದ ಶಾಲಾ ಹಬ್ಬದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಕೆಥೆಡ್ರಲ್ ಚರ್ಚ್ನ ರೆಕ್ಟರ್ ಸ್ಟಾನಿ ಬಿ.ಲೋಬೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯ ಜನಾರ್ದನ ತೋನ್ಸೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಡುಪಿ ಬಿಲ್ಡರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಜೆರಿ ವಿನ್ಸೆಂಟ್ ಡಯಸ್ ಮಾತನಾಡಿದರು.
ತಾಪಂ ಸದಸ್ಯ ಧನಂಜಯ ಅಮೀನ್, ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಕೋಟ್ಯಾನ್, ಸದಸ್ಯ ಬ್ಯಾಪ್ಟಿಸ್ಟ್ ಡಾಯಸ್, ನಿವೃತ್ತ ಬ್ಯಾಂಕ್ ಅಧಿಕಾರಿ ಗ್ರೆಗೋರಿ ಡಿಸೋಜ, ಶಾಲಾ ಹಳೆ ವಿದ್ಯಾರ್ಥಿ ಮೆಲ್ವಿನ್ ಸಿಕ್ವೇರಾ, ನಿವೃತ್ತ ಶಿಕ್ಷಕಿ ಹೆಲೆನ್ ಡಿಸೋಜ, ಮುಖ್ಯೋಪಾಧ್ಯಾಯಿನಿ ಸುಶೀಲ ಮೊಂತೆರೋ, ರಕ್ಷಕ ಶಿಕ್ಷ ಸಂಘದ ಅಧ್ಯಕ್ಷ ಸುಜಯ, ವಿದ್ಯಾರ್ಥಿ ನಾಯಕ ಭುವನ್ ಉಪಸ್ಥಿತರಿದ್ದರು. ಮಿಲಾಗ್ರಿಸ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಡಾ.ನೇರಿ ಕರ್ನೇಲಿಯೊ ಸ್ವಾಗತಿಸಿ ದರು. ಹೆರಾಲ್ಡ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.