ಡಿ. 27ರಂದು ಸುರಿಬೈಲಿನಲ್ಲಿ ಸಲಫಿ ಸಮಾವೇಶ
ಮಂಗಳೂರು, ಡಿ.26: 'ಧರ್ಮ: ಸಹಿಷ್ಣುತೆ, ಸಹಬಾಳ್ವೆ, ಶಾಂತಿ' ಎಂಬ ಕೇಂದ್ರೀಯ ವಿಷಯದಲ್ಲಿ ಕೇರಳ ನದ್ವತುಲ್ ಮುಜಾಹಿದೀನ್ (ಕೆ.ಎನ್.ಎಂ.) ಡಿಸೆಂಬರ್ ಕೊನೆಯಲ್ಲಿ ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಎಂಬಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮುಜಾಹಿದ್ ಸಮ್ಮೇಳನದ ಪ್ರಚಾರಾರ್ಥ ಎಸ್.ಕೆ.ಎಸ್.ಎಂ. ವತಿಯಿಂದ ಡಿ.27ರಂದು ಸುರಿಬೈಲು ಬೋಳಂತೂರು ಸಮೀಪ ಮಗ್ರಿಬ್ ನಮಾಝ್ನ ಬಳಿಕ ಸಲಫಿ ಸಮಾವೇಶವು ಜರಗಲಿದೆ.
ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲಾ ಮುಸ್ಲಿಯಾರ್ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.
Next Story