ಉಳ್ಳಾಲ: ದಾರಿಮೀಸ್ ಉಲಮಾ ಸಮಾವೇಶ ಪ್ರಚಾರಕ್ಕೆ ಚಾಲನೆ
ಉಳ್ಳಾಲ, ಜ. 5: ದಾರುಸ್ಸಲಾಂನಿಂದ ಬಿರುದು ಪಡೆದ ದಾರಿಮಿ ಉಲಮಾಗಳ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಮಾಣಿ ಗಡಿಯಾರ ಮಸೀದಿ ವಠಾರದಲ್ಲಿ ಜನವರಿ 13ರಂದು ನಡೆಯುವ ಬೃಹತ್ ಉಲಮಾ ಸಂಗಮ ಹಾಗೂ ಸಂಶುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮದ ಪ್ರಚಾರಕ್ಕೆ ಉಳ್ಳಾಲದಲ್ಲಿ ಚಾಲನೆ ನೀಡಲಾಯಿತು.
ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ಅಬ್ದುಲ್ ರಝಾಕ್ ಉಸ್ತಾದ್ ಮಲೇಶಿಯಾ ಇವರ ನೇತೃತ್ವದಲ್ಲಿ ನಡೆದ ವಿಶೇಷ ಪ್ರಾರ್ಥನೆ ಬಳಿಕ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಅವರು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು
ಈ ಸಂದರ್ಭ ಜಿಲ್ಲಾ ಮದರಸ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಐ.ಮೊಯಿದ್ದಿನಬ್ಬ, ಉದ್ಯಮಿ ಕೊಂಬಕುದಿ ಇಬ್ರಾಹಿಂ, ಎಸ್ವೈಎಸ್ ಮುಖಂಡ ಹಕೀಂ ಪರ್ತಿಪ್ಪಾಡಿ, ದಾರಿಮೀಸ್ ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ, ಅಬ್ದಲ್ ರಹಿಮಾನ್ ದಾರಿಮಿ ತಬೂಕ್, ಖಾಸಿಂ ದಾರಿಮಿ ಕಿನ್ಯ, ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಫಾರೂಕ್ ದಾರಿಮಿ ಪಜೀರ್, ಬಶೀರ್ ದಾರಿಮಿ ಕಲ್ಲೇಗ, ಜಮಾಲುದ್ದೀನ್ ದಾರಿಮಿ ಗಡಿಯಾರ, ಹಾರೂನ್ ಅಹ್ಸನಿ ಕೋಟೆಕಾರ್, ಕೇಂದ್ರ ಜುಮಾ ಮಸೀದಿಯ ಖತೀಬ್ ಶಮೀಮ್ ಸಖಾಫಿ, ಝೈನ್ ಸಖಾಫಿ, ಜುನೈದ್ ಮಖ್ದೂಮಿ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಮಜೀದ್ ದಾರಿಮಿ ಗುರುಪುರ ಸ್ವಾಗತಿಸಿದರು. ಎಸ್.ಬಿ.ಮುಹಮ್ಮದ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಎ.ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.