ಜೂಜಾಟ ಐವರು ಬಂಧನ
ಮಂಗಳೂರು, ಜ. 18: ನಗರದ ಕೊಡಿಯಾಲ್ಬೈಲ್ನಲ್ಲಿ ಗುರುವಾರ ಸಂಜೆ ಜೂಜಾಡುತ್ತಿದ್ದ ಆರೋಪದಲ್ಲಿ ಐವರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೊಂಚಾಡಿ ನಿವಾಸಿ ದೇವದಾಸ, ಹೊಸಬೆಟ್ಟು ನಿವಾಸಿ ರವಿ ಕುಮಾರ್, ಕೆಪಿಟಿ ನಿವಾಸಿ ಸಂಗಮೇಶ ಪಾಟೀಲ್, ಕಾವೂರು ಈಶ್ವರ ನಗರ ನಿವಾಸಿ ಸುನಿಲ್ ಕುಮಾರ್, ಕುರ್ನಾಡು ನಿವಾಸಿ ಮಹಮ್ಮದ್ ಅಝರ್ ಬಂಧಿತ ಆರೋಪಿಗಳು.
ಬಂಧಿತರಿಂದ ಆಟಕ್ಕೆ ಬಳಸಿದ್ದ 6 ಸಾವಿರ ನಗದು, ಇಸ್ಪೀಟ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
Next Story