ಬದುಕಿನ ಹೊಸ ದೃಷ್ಟಿಕೋನಕ್ಕೆ ಮಾನಸಿಕ ಶಾಂತಿ ಮುಖ್ಯ: ಹರಿ ಕೋಟ್ಯಾನ್
ಲ್ಯಾಂಡ್ ಮಾರ್ಕ್ ಪೋರಂ ಮಾಹಿತಿ ಕಾರ್ಯಕ್ರಮ
ಮಂಗಳೂರು, ಜ.20: ಬದುಕಿನಲ್ಲಿ ಹೊಸ ದೃಷ್ಟಿಕೋನದಿಂದ ಹೊಸ ದಾರಿ ಕಂಡು ಕೊಳ್ಳಲು ಸಾಧ್ಯ. ಎಲ್ಲದಕ್ಕೂ ಮಾನಸಿಕ ಶಾಂತಿ ಮುಖ್ಯ ಎಂದು ಮುಂಬೈಯ ಲ್ಯಾಂಡ್ ಮಾರ್ಕ್ ಎಜುಕೇಶನ್ ವರ್ಲ್ಡ್ ವೈಡ್ನ ಕೋರ್ಸ್ ಲೀಡರ್ ಹರಿ ಕೊಟ್ಯಾನ್ ತಿಳಿಸಿದ್ದಾರೆ.
ಯುನಿಟಿ ಅಕಾಡಮಿ ಆಫ್ ಎಜುಕೇಶನ್ ಮತ್ತು ಐಎಂಎ ಮಂಗಳೂರು ಘಟಕದ ವತಿಯಿಂದ ಹಮ್ಮಿಕೊಂಡ ಲ್ಯಾಂಡ್ ಮಾರ್ಕ್ ಪೋರಂ ಮಾಹಿತಿ ಕಾರ್ಯಕ್ರಮವನ್ನುದ್ದೇಶಿ ಅವರು ಮಾತನಾಡುತ್ತಿದ್ದರು.
ಸಕಾರಾತ್ಮಕ ಚಿಂತನೆ, ಒತ್ತಡಗಳ ನಿರ್ವಹಣೆ ಪ್ರಾಕೃತಿಕವಾಗಿರುವ ಶಕ್ತಿಯನ್ನು ಬಳಸಿಕೊಂಡು ನಮ್ಮಲ್ಲಿ ಸುಪ್ತವಾಗಿರುವ ಶಕ್ತಿಯನ್ನು ಬಳಸಿಕೊಳ್ಳಲು ಮಾನಸಿಕ ಸಂತೃಪ್ತಿ ಮುಖ್ಯ. ಇದನ್ನು ಪಡೆಯಲು ಮೊದಲು ನಮ್ಮ ನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ಹರಿ ಕೊಟ್ಯಾನ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಯುನಿಟಿ ಅಕಾಡಮಿ ಆಫ್ ಎಜುಕೇಶನ್ನ ಅಧ್ಯಕ್ಷ ಡಾ.ಸಿ.ಪಿ. ಹಬೀಬು ರಹಿಮಾನ್, ಮಂಗಳೂರು ಐಎಂಎ ಘಟಕದ ಅಧ್ಯಕ್ಷ ಡಾ.ಕೆ.ಆರ್.ಕಾಮತ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story