'ಟ್ಯಾಲೆಂಟ್'ನಲ್ಲಿ ಗಣರಾಜ್ಯೋತ್ಸವ
ಮಂಗಳೂರು, ಜ.26: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಬಾವಾ ಬಿಲ್ಡರ್ಸ್ ಮತ್ತು ಪುತ್ತಿಗೆ ಬಿಲ್ಡರ್ಸ್ ಡೆವಲಪರ್ಸ್ ಸಂಯುಕ್ತ ಆಶ್ರಯದಲ್ಲಿ 69ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಜಿಪ ನಡು ಕೇಂದ್ರ ಜುಮಾ ಮಸೀದಿಯ ಖತೀಬ್ ಮೌಲಾನಾ ಅಶ್ಫಾಕ್ ಫೈಝಿ, ನ್ಯಾಷನಲ್ ಎ.ಒ.ಎಸ್. ನಿರ್ದೇಶಕ ಫಾ.ಕ್ಲೋಡಿಯಸ್ ಕೋರ್ಡ ಒ.ಪಿ., ತೇಜಸ್ ಲ್ಯಾಬ್ ಆಡಳಿತ ನಿರ್ದೇಶಕ ಡಾ. ಪ್ರಕಾಶ್ ಶೆಟ್ಟಿ ಜೊತೆಯಾಗಿ ಧ್ವಜಾರೋಹಣಗೈದು ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಟ್ಯಾಲೆಂಟ್ ಸ್ಥಾಪಕಾಧ್ಯಕ್ಷ ಮತ್ತು ವಿಶ್ವಾಸ್ ಬಾವಾ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತಿಗೆ ಬಿಲ್ಡರ್ಸ್ ಡೆವಲಪರ್ಸ್ನ ಆಡಳಿತ ನಿರ್ದೇಶಕ ಫತೇ ಮುಹಮ್ಮದ್ ಪುತ್ತಿಗೆ, ವಿಶ್ವಾಸ್ ಎಸ್ಟೇಟ್ಸ್ನ ಸುಲೈಮಾನ್ ಶೇಖ್ ಬೆಳುವಾಯಿ, ವಿಶ್ವಾಸ್ ಕ್ರೌನ್ನ ಲಾಯ್ ಫ್ರಾಂಕ್, ಅಬ್ದುಲ್ ಖಾದರ್ ಗೋಲ್ಡ್ ಹೌಸ್, ವಿಶ್ವಾಸ್ ಬಾವಾ ಬಿಲ್ಡರ್ಸ್ನ ಯೂಸುಫ್, ಅಬ್ದುಲ್ ಹಮೀದ್, ಫರ್ವೇಝ್, ಅಬ್ದುಲ್ಲ, ನಾಸಿರ್, ನಿಝಾಮ್, ಅತಾವುಲ್ಲ, ಶರೀಫ್, ಸಾಹಿತಿ, ರಮ್ಯಾ, ಶುಭಾ, ಶಾಂತಿ, ಬಿಂದಿಯಾ, ಟ್ಯಾಲೆಂಟ್ನ ಅಬ್ದುಲ್ ಮಜೀದ್ ತುಂಬೆ, ಅಬ್ದುಸ್ಸಲಾಂ ಮುಸ್ಲಿಯಾರ್ ಪೆರ್ನೆ, ಅಸ್ಪರ್ ಹುಸೈನ್, ಅಸ್ಲಂ ಗೂಡಿನಬಳಿ, ಆಸರೆ ವಿಮೆನ್ಸ್ ಫೌಂಡೇಶನ್ನ ಆತಿಕಾ ರಫೀಕ್, ರೊಹರಾ ಉಳ್ಳಾಲ, ಸುಹಾನ ಸಫರ್, ಅಧ್ಯಕ್ಷೆ, ಟ್ಯಾಲೆಂಟ್ ಮಹಿಳಾ ಗ್ರಾಜುವೇಟ್ ಅಸೋಸಿಯೇಶನ್ ಮತ್ತು ಸದಸ್ಯರು, ಸೈಟ್ ಸೂಪರ್ವೈಸರ್ಗಳು, ಫ್ಲಾಟ್ ನಿವಾಸಿಗಳು, ಅಂಗಡಿ ಮಾಲಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.