ಕಾರ್ನಾಡ್: ಇಂದು ಇಮಾಮ್ಸ್ ಕೌನ್ಸಿಲ್ನಿಂದ ಧಾರ್ಮಿಕ ಪ್ರವಚನ
ಮುಲ್ಕಿ, ಜ.28: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಕಾರ್ನಾಡಿನ ಗಾಂಧಿ ಮೈದಾನದಲ್ಲಿ ಜ.28ರಂದು ಸಂಜೆ 7 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ನ ಕೇರಳ ರಾಜ್ಯ ಕಾರ್ಯದರ್ಶಿ ಹಾಫಿಳ್ ಶಫೀಕ್ ಅಲ್ ಖಾಸಿಮಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ವೌಲಾನಾ ಖಾದರ್ ಫೈಝಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ನ ದ.ಕ. ಜಿಲ್ಲಾಧ್ಯಕ್ಷ ರಫೀಕ್ ದಾರಿಮಿ, ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಪಿ.ಎಂ.ರಫೀಕ್ ದಾರಿಮಿ, ಪಿಎಫ್ಐ ದ.ಕ. ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಎ.ಕೆ.ಅಶ್ರಫ್, ಅಬೂಬಕರ್ ಸಿದ್ದೀಕ್, ಮುಲ್ಕಿ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕಿಲ್ಪಾಡಿ ಹನಫಿ ಜಮಾಅತ್ನ ಕೆ.ಎಂ.ರಫೀಕ್, ಎಸ್ಕೆಎಸ್ಎಂ ಮುಲ್ಕಿ ಘಟಕದ ಅಧ್ಯಕ್ಷ ಉಮರ್ ಫಾರೂಕ್, ಎಸ್ಡಿಪಿಐನ ಶರೀಫ್ ಕೊಲ್ನಾಡು, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ಮುಸ್ಲಿಮ್ ಯಂಗ್ಮೆನ್ಸ್ ಅಧ್ಯಕ್ಷ ಮುಹಮ್ಮದ್ ಹುಸೈನ್ ಕೇರಿ, ಹಿಮಾಯತುಲ್ ಇಸ್ಲಾಮ್ ದಫ್ ಕಮಿಟಿ ಅಧ್ಯಕ್ಷ ಮುನೀರ್ ಕಾರ್ನಾಡ್, ನುಸ್ರತುಲ್ ಮಸಾಕೀನ್ ಅಧ್ಯಕ್ಷ ಎಂ.ಎ.ಅಮಾನುಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.