ಮಂಜೇಶ್ವರ: ಹಳಿ ದಾಟುತ್ತಿದ್ದವರಿಗೆ ರೈಲು ಢಿಕ್ಕಿ; ಮಗು ಸಹಿತ ಮೂವರು ಮೃತ್ಯು
ಮಂಜೇಶ್ವರ, ಜ. 31: ಮಂಜೇಶ್ವರ ರೈಲು ನಿಲ್ದಾಣ ಬಳಿ ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಹಾಗೂ ಮೂರು ವರ್ಷದ ಮಗುವೊಂದು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಪೊಸೋಟ್ ನ ಆಮಿನಾ (45), ಆಯಿಶಾ(43), ಆಯಿಶಾರ ಪುತ್ರ ತಾಮೀಲ್ ಎಂದು ಗುರುತಿಸಲಾಗಿದೆ.
ರೈಲು ಹಳಿ ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ರೈಲು ಇಂಜಿನ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story