ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಚಿಕಿತ್ಸೆಗೆ ವಕ್ಫ್ ಪರಿಷತ್ತಿನಿಂದ ನೆರವು
ಸುಳ್ಯ,ಫೆ.11:ಅನಾರೋಗ್ಯದಿಂದ ಬಳಲುತ್ತಿದ್ದ ಮುಹಮ್ಮದ್ ರಫೀಕ್ ಅವರ ಪುತ್ರ ಇಬ್ರಾಹಿಂ ರಾಝಿಕ್ ಅವರ ಚಿಕಿತ್ಸೆಗಾಗಿ ಕರ್ನಾಟಕ ವಕ್ಫ್ ಪರಿಷತ್ತಿನ ಆರೋಗ್ಯ ಪರಿಹಾರ ನಿಧಿಯಿಂದ 50 ಸಾವಿರ ರೂ. ಮಂಜೂರು ಮಾಡಲಾಗಿದೆ. ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್.ಸಂಶುದ್ದೀನ್ ಅವರು ಫಲಾನುಭವಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್, ಕೆ.ಬಿ.ಇಬ್ರಾಹಿಂ ಉಪಸ್ಥಿತರಿದ್ದರು.
Next Story