ಫೆ.15: ಕೊಲ್ಲರಕೋಡಿಯಲ್ಲಿ 14ನೇ ಸ್ವಲಾತ್ ವಾರ್ಷಿಕೋತ್ಸವ
ಕೊಣಾಜೆ, ಫೆ.14: ನೂರುಲ್ ಹುದಾ ಮಸ್ಜಿದ್ ತಖ್ವಾ, ಎಸ್ ವೈಎಸ್, ಎಸ್ಸೆಸ್ಸೆಫ್ ಕೊಲ್ಲರಕೋಡಿ ಇದರ ಜಂಟಿ ಆಶ್ರಯದಲ್ಲಿ 14ನೇ ಸ್ವಲಾತ್ ವಾರ್ಷಿಕೋತ್ಸವವು ಫೆ.15ರಂದು ರಾತ್ರಿ 7 ಗಂಟೆಗೆ ಕೊಲ್ಲರಕೋಡಿ ನೂರುಲ್ ಹುದಾ ಮಸ್ಜಿದ್ ತಖ್ವಾ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಅಬ್ಬಾಸ್ ಉಸ್ತಾದ್ ಉದ್ಘಾಟಿಸಲಿದ್ದಾರೆ. ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಅಬ್ದುಲ್ ರಝಾಕ್ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖಾಸಿಂ ಲತ್ವೀಫಿ ಸ್ವಾಗತಿಸಲಿದ್ದಾರೆ. ಅಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್ ದುವಾಶೀರ್ವಚನ ಗೈಯಲಿದ್ದಾರೆ. ಪಿ.ಎ ಅಹ್ಮದ್ ಬಾಖವಿ, ಉಮರ್ ಮದನಿ ಮುಖ್ಯ ಪ್ರಭಾಷನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನ್, ಮಂಜನಾಡಿ ಜುಮಾ ಮಸೀದಿ ಅಧ್ಯಕ್ಷ ಮೈಸೂರು ಬಾವಾ, ದ.ಕ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಹ್ಮದ್ ಕುಂಞಿ ಹಾಜಿ, ಎನ್.ಎಸ್ ಕರೀಂ, ಕೆ.ಎಂ ಅಬ್ದುಲ್ಲಾ ಹಾಜಿ, ಇಕ್ಬಾಲ್ ಹಾಜಿ ಹಾಗು ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.