ಉಡುಪಿ ನಗರಸಭೆ ಸದಸ್ಯನಿಂದ ಯುವಕನಿಗೆ ಹಲ್ಲೆ : ದೂರು
ಉಡುಪಿ, ಫೆ.19: ಮರ ಕಡಿಯುವ ವಿಚಾರದಲ್ಲಿ ಉಡುಪಿ ನಗರಸಭೆ ಸದಸ್ಯ ರಮೇಶ್ ಪೂಜಾರಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಕೆಳಪರ್ಕಳದ ಗಣೇಶ ಆಚಾರ್ಯ(27) ಎಂಬವರು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫೆ.18ರಂದು ಬೆಳಗ್ಗೆ ನಗರದ ಗುಂಡಿಬೈಲಿನ ಜಾಗದಲ್ಲಿರುವ ಮರವನ್ನು ಕಡಿಯುತ್ತಿದ್ದ ವಿಚಾರ ತಿಳಿದು ಗಣೇಶ ಆಚಾರ್ಯ ಸ್ಥಳಕ್ಕೆ ಬಂದಿದ್ದು, ಇದರ ಬಗ್ಗೆ ಕೇಳಿದಕ್ಕೆ ಅಲ್ಲೇ ಇದ್ದ ನಗರಸಭೆ ಸದಸ್ಯ ರಮೇಶ್ ಪೂಜಾರಿ ಅವಾಚ್ಯ ಶಬ್ದಗಳಿಂದ ಬೈದು, ಗಣೇಶ್ ಆಚಾರ್ಯರಿಗೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದರೆಂದು ದೂರಲಾಗಿದೆ.
ನಂತರ ರಮೇಶ್ ಪೂಜಾರಿ ಹಾಗೂ ಅವರ ಜೊತೆ ಇದ್ದ ಪ್ರಕಾಶ್ ಪೂಜಾರಿ, ಕಿಶೋರ್, ಪ್ರವೀಣ ಮತ್ತಿತರರು ಸೇರಿ ಗಣೇಶ್ ಆಚಾರ್ಯ ಹಾಗೂ ಅವರ ತಮ್ಮ ಪ್ರಾಣೇಶ್ಗೆ ಕೈ ಹಾಗೂ ಕಲ್ಲಿನಿಂದ ಹೊಡೆದು ಮೊಬೈಲ್ ಜಖಂಗೊಳಿಸಿ, ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುವುದಾಗಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story