ಅಳಕೆಮಜಲು : ಮದ್ರಸ ಸಮ್ಮೇಳನ ಸಮಾರೋಪ
ಕುಳ,ಫೆ.19 : ಮುಹ್ಯುದ್ದೀನ್ ಜುಮಾ ಮಸ್ಜಿದ್ ಹಾಗೂ ಹಿದಾಯತುಲ್ ಇಸ್ಲಾಂ ಮದ್ರಸ ಇದರ ವತಿಯಿಂದ 'ಧರ್ಮ ಅಳಿಯದೆ ಜಗತ್ತು ಉಳಿಯಲಿ' ಎಂಬ ಘೋಷ ವಾಕ್ಯದೊಂದಿಗೆ ಎಸ್.ಜೆ.ಎಂ ಹಮ್ಮಿಕೊಂಡ ಮದ್ರಸ ಸಮ್ಮೇಳನದ ಸಮಾರೋಪ ಸಮಾರಂಭ ತಾಜುಲ್ ಉಲಮಾ ವೇದಿಕೆ ಅಳಕೆಮಜಲಿನಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಶರೀಫ್ ಸಖಾಫಿಯವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ವೈ.ಎಸ್ ಅಳಕೆಮಜಲು ಬ್ರಾಂಚ್ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಖಾಸಿಮಿ ಉದ್ಘಾಟಿಸಿದರು. ಸಯ್ಯದ್ ಹಂಝ ಝುಹ್ರಿ ತಂಙಳ್ ಕಾರ್ಪಾಡಿ ಉಪನ್ಯಾಸ ಮತ್ತು ಪ್ರಾರ್ಥನೆಗೆ ನೇತೃತ್ವ ನೀಡಿದರು.
ಸಮಾರಂಭದಲ್ಲಿ ಎಸ್.ಜೆ.ಎಂ ಪುತ್ತೂರು ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಅದಿ ಕೋಲ್ಪೆ, ಅಝೀಝ್ ಬಾಖವಿ ಅಳಕೆಮಜಲು, ಖಾಸಿಂ ಸಖಾಫಿ ಅಳಕೆಮಜಲು, ಅಝೀಝ್ ಅಂಜದಿ, ಖಾದರ್ ಮುಸ್ಲಿಯಾರ್, ಹನೀಫ್ ಸಅದಿ, ಫಾರೂಕ್ ಹಿಮಮಿ, ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮಸ್ಕತ್, ಅಬ್ದುಲ್ ರಹಿಮಾನ್ ಹಾಜಿ ಬೀಡಿ, ಮುಹಮ್ಮದ್ ಕುಂಞ ಹಾಜಿ, ಕುಂಞ ಹಾಜಿ, ರಝಾಕ್ ಹಾಜಿ, ಅಶ್ರಫ್ ಕೆ.ಜಿ.ಎನ್, ಅಬೂಬಕ್ಕರ್, ಶಾಕೀರ್, ಹೈದರ್ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಮದ್ರಸ ಮುಖ್ಯೋಪಾಧ್ಯಾಯರಾದ ದಾವೂದ್ ಅಶ್ರಫಿ ಸ್ವಾಗತಿಸಿ, ಧನ್ಯವಾದವಿತ್ತರು.