ಮರಕ್ಕೆ ಬೈಕ್ ಢಿಕ್ಕಿ: ಮಗು ಮೃತ್ಯು
ಶಂಕರನಾರಾಯಣ, ಮಾ.19: ಶಂಕರನಾರಾಯಣ ಗ್ರಾಮದ ಕಲ್ಲನಕೆರೆ ಎಂಬಲ್ಲಿ ಮಾ.18ರಂದು ಸಂಜೆ ವೇಳೆ ಬೈಕೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಐದು ವರ್ಷದ ಮಗುವೊಂದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಶಂಕರನಾರಾಯಣ ಕಡೆಯಿಂದ ಅಂಪಾರು ಕಡೆಗೆ ಬರುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕಿನಲ್ಲಿದ್ದ ಐದು ವರ್ಷದ ಮಗು ಸಿಂಚನ ಮೃತಪಟ್ಟಿತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story