ಕಲ್ಲಾಪು: ಕಾರಿಗೆ ಢಿಕ್ಕಿ ಹೊಡೆದ ಟ್ಯಾಂಕರ್
ಮಂಗಳೂರು, ಮಾ.20: ರಾ.ಹೆ. 66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ಮಂಗಳವಾರ ರಾತ್ರಿ ಕಾರಿಗೆ ಟ್ಯಾಂಕರ್ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ರಾಹುಲ್ ಗಾಂಧಿ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿರುವುದರಿಂದ ಸಚಿವ ಯು.ಟಿ.ಖಾದರ್ ಮತ್ತಿತರರು ಕಲ್ಲಾಪು ಬಳಿ ಸ್ವಾಗತಿಸಲು ನಿಂತಿದ್ದರು. ಈ ಸಂದರ್ಭ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಟ್ಯಾಂಕರ್ ಢಿಕ್ಕಿ ಹೊಡೆಯಿತು. ಇದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾಯಿತು. ತಕ್ಷಣ ಸಚಿವ ಯು.ಟಿ.ಖಾದರ್ ಸುಗಮ ಸಂಚಾರದ ವ್ಯವಸ್ಥೆ ಮಾಡಿದರು. ಬಳಿಕ ರಾಹುಲ್ ಗಾಂಧಿಯವರನ್ನು ಬರಮಾಡಿಕೊಂಡು ಉಳ್ಳಾಲ ದರ್ಗಾಕ್ಕೆ ಕರೆದೊಯ್ದರು.
Next Story