ಎ.15: ನೆಲ್ಯಾಡಿ ಸುನ್ನೀ ಸಮ್ಮೇಳನಕ್ಕೆ ಎ.ಪಿ ಉಸ್ತಾದ್
ನೆಲ್ಯಾಡಿ, ಮಾ. 29: ಸುನ್ನೀ ಯುವ ಸಂಘ, ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ ನೆಲ್ಯಾಡಿ ಇದರ ಆಶ್ರಯದಲ್ಲಿ ಎ.15 ರಂದು ಬೃಹತ್ ಸುನ್ನೀ ಮಹಾ ಸಮ್ಮೇಳನ ನಡೆಯಲಿದೆ.
ಕಾರ್ಯಕ್ರಮದ ನೇತೃತ್ವವನ್ನು ಅಖಿಲ ಭಾರತ ಸುನ್ನೀ ಜಂಹಿಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ವಹಿಸಲಿದ್ದಾರೆ.
ಖಾಝಿ ಅಸೈಯ್ಯದ್ ಫಝಲ್ ಕೋಯಮ್ಮ ಕೂರ ತಂಘಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಬೇಕಲ್ ಉಸ್ತಾದ್, ಮುಲ್ಲೂರ್ಕೆರೆ ಮುಹಮ್ಮದಲಿ ಸಖಾಫಿ, ಅಸೈಯ್ಯದ್ ಸದಾತ್ ತಂಙಲ್, ಅಸೈಯ್ಯದ್ ಮಲ್ಜಹ್ ಜಲಾಲುದ್ದೀನ್ ತಂಙಲ್, ಅಸೈಯ್ಯದ್ ಶಿಹಾಬುದ್ದೀನ್ ತಂಙಲ್ ಕಿಲ್ಲೂರು, ಝೈನುಲಾಬಿದೀನ್ ಕಾಜೂರು ತಂಙಲ್ , ಉಜಿರೆ ಇಸ್ಮಾಯಿಲ್ ತಂಙಲ್, ಕಾವಲ್ಕಟ್ಟೆ ಹಝ್ರತ್, ಕರ್ನಾಟಕ ರಾಜ್ಯ ಯೋಜನ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ, ಸಚಿವರಾದ ಯು.ಟಿ ಖಾದರ್, ತನ್ವೀರ್ ಸೇಠ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕ ಝಮೀರ್ ಅಹ್ಮದ್ ಖಾನ್, ಬಿ. ಎಂ ಫಾರೂಖ್ ಹಾಜಿ, ಯೆನೆಪೊಯ ಅಬ್ದುಲ್ಲಾ ಕುಂಞಿ, ವಿನಯ್ ಕುಮಾರ್ ಸೋರೆ, ಮೌಲಾನಾ ಶಾಫೀ ಸಹದಿ ಬೆಂಗಳೂರು, ರಾಷ್ಟೀಯ ಮಟ್ಟದ ಉಲಮಾ-ಉಮರಾ ನಾಯಕರು ಭಾಗವಹಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.