ಕಥುವಾ ಪ್ರಕರಣ : ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆ ವತಿಯಿಂದ ಪ್ರತಿಭಟನೆ
ಮುಡಿಪು,ಎ.16: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಇಂದು ಬೆಳಿಗ್ಗೆ ಮುದುಂಗಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.
ಜಮಾಅತ್ ಖತೀಬರಾದ ಹೈದರ್ ಅಲಿ ಹಿಮಮಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಬಾಲಕಿಯನ್ನು ಬರ್ಬರವಾಗಿ ಕೊಲೆಗೈದ ಕೊಲೆಗಡುಕರನ್ನು ರಕ್ಷಿಸಲು ಯಾರೂ ಮುಂದಾಗಬಾರದೆಂದೂ, ಅವರಿಗೆ ಉನ್ನತ ಮಟ್ಟದ ಶಿಕ್ಷೆ ಆಗಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಎಸ್ಸೆಸ್ಸೆಫ್ ದ. ಕ ಜಿಲ್ಲಾ ಸದಸ್ಯರಾದ ಜಮಾಲುದ್ದೀನ್ ಸಖಾಫಿ ಎಮ್.ಎಸ್.ಉಮರ್ ಸಅದಿ, ಅಬ್ದುಸ್ಸಮದ್ ಮದನಿ,ಮೂಸಾ ಕಲೀಂ ಮದನಿ, ಅಬ್ದುಲ್ಲ ಸಖಾಫಿ, ಅಹ್ಮದ್ ಕುಂಞ ಎಂ ಕೆ, ಕೆ ಜಿ ಎನ್ ಉಮರ್ ಹಾಜಿ, ಸಿ ಕೆ ಮುಹಮ್ಮದ್, ಉಮರ್ ಎನ್, ಅಬೂಬಕ್ಕರ್ ಎಂ ಬಿ, ಅಬ್ಬಾಸ್ ಎನ್, ಹಸೈನಾರ್ ಕೆ, ಹನೀಫ್ ಎಂ ಪಿ,ಅಬೂಬಕ್ಕರ್ ಎಂ ಎಸ್, ಅಬೂಬಕ್ಕರ್ ಕೆ, ಹಸೈನಾರ್ ಎಂ ಎಂ, ಯಾಕೂಬ್ ಎಂ, ಮುಹಮ್ಮದ್ ಪಿ, ಅಬ್ದುಲ್ ರಹ್ಮಾನ್ ಕೆ, ಅಶ್ರಫ್ ಜಿ, ನೌಷಾದ್ ಕೆ ಎ, ಇಕ್ಬಾಲ್ ಡಿ, ಉಸ್ಮಾನ್ ಎಂ ಎಂ, ಸಿದ್ದೀಕ್ ಎಂ ಕೆ, ಅಬ್ದುಲ್ ಹಮೀದ್ ಎಂ ಎಂ, ಅಬೂಬಕ್ಕರ್ ಎಂ ಪಿ, ಅಬ್ದುಲ್ ರಹ್ಮಾನ್ ಎಂ ಕೆ, ಅಬ್ದುಲ್ ಅಝೀಝ್ ಡಿ, ಕಲಂದರ್ ಕೆ, ಇರ್ಫಾನ್ ಕೆ, ಆಸಿಫ್ ಕೆ, ಸಮೀರ್ ಜಿ, ಶಫೀಖ್ ಎಂ,ಇಕ್ಬಾಲ್ ಉಪಸ್ಥಿತರಿದ್ದರು.