ನೀತಿ ಸಂಹಿತೆ ಉಲ್ಲಂಘಿಸಿ ತೊಗರಿಬೇಳೆ ವಿತರಣೆ
ಕೊಲ್ಲೂರು, ಎ.21: ಮುದೂರು ಗ್ರಾಮದ ನೀರ್ಜೆಡ್ಡು ಎಂಬಲ್ಲಿರುವ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಭಾವಚಿತ್ರವಿರುವ ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿ ತೊಗರಿಬೇಳೆ ವಿತರಿಸುವ ಮೂಲಕ ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಂತೆ ಚುನಾವಣಾಧಿಕಾರಿ ಕೆ.ಎಂ.ಹೆಗ್ಡೆ ಎ.20ರಂದು ಮಧ್ಯಾಹ್ನ ಸೊಸೈಟಿಗೆ ತೆರಳಿ ಪರಿಶೀಲಿಸಿದಾಗ ಒಂದು ಕೆ.ಜಿ. ತೂಕದ ತೊಗರಿಬೇಳೆ ಪ್ಯಾಕೆಟ್ ಸಾರ್ವಜನಿಕರಿಗೆ ವಿತರಣೆ ಮಾಡುತ್ತಿರುವುದು ಕಂಡು ಬಂದಿದೆ. ಈ ಮೂಲಕ ಸಂಘದ ಕಾರ್ಯದರ್ಶಿ ಸಾಲಿ, ಸ್ಟೋರ್ ಕೀಪರ್ ಗೀತಾ ಕೆ.ಶೆಟ್ಟಿ, ಹಾಗೂ ಕುಂದಾಪುರ ಟಿಎಪಿಸಿಎಂಸಿಯ ವ್ಯವಸ್ಥಾಪಕರು ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿರುವುದಾಗಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ದೊರೆತ ಒಂದು ಕೆ.ಜಿ. ತೂಕದ ಮೂರು ತೊಗರಿಬೇಳೆ ಪಾ್ಯಕೆಟ್ನ್ನು ವಶಪಡಿಸಿಕೊಳ್ಳ ಲಾಗಿದೆ.
Next Story