ಕಾರ್ಕಳ: ಮಹಿಳೆಯ ಸರ ಕಳವು
ಕಾರ್ಕಳ, ಎ.22: ಕಾರ್ಕಳ ಶ್ರೀವೆಂಕಟ್ರಮಣ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಿದ್ದ ರಥದ ಬಳಿ ಎ.21ರಂದು ರಾತ್ರಿ 8ಗಂಟೆ ಸುಮಾರಿಗೆ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ತೆಳ್ಳಾರ್ ರಸ್ತೆಯ ಜಯಂತಿ ಪ್ರಭು(70) ಎಂಬವರು ಹಣ್ಣು ಕಾಯಿ ಮಾಡಿಸುತ್ತಿದ್ದ ವೇಳೆ ಕಳ್ಳರು ಅವರ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಂ ತೂಕದ ಮಂಗಳ ಸೂತ್ರವನ್ನು ತುಂಡು ಮಾಡಿ ಕಳವು ಮಾಡಿಕೊಂಡು ಹೋಗಿದ್ದು, ಇದರ ಮೌಲ್ಯ ಒಂದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story