ಮಂಗಳೂರು ವಿಧಾನಸಭಾ ಕ್ಷೇತ್ರ: ನಾಮಪತ್ರ ಸಲ್ಲಿಸಿದ ಯು.ಟಿ. ಖಾದರ್
ಮಂಗಳೂರು, ಎ. 23: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಯು.ಟಿ. ಖಾದರ್ ಅವರು ಸೋಮವಾರ ನಗರದ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ನೂರಾರು ಬೆಂಬಲಿಗರು ಅವರೊಂದಿಗೆ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸುವ ಮುನ್ನ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಸಚಿವ ಖಾದರ್ ಭೇಟಿ ನೀಡಿದರು. ಇಂದು ಬೆಳಗ್ಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು. ನಂತರ ಪೋಸೋಟ್ ಮಲ್ಹರ್ ವಿದ್ಯಾರ್ಥಿಗಳ ಜೊತೆ ಪ್ರಾರ್ಥನೆ ನಡೆಸಿ, ಉದ್ಯಾವರ ಅತಾವುಲ್ಲಾ ತಂಙಳ್ ರನ್ನು ಭೇಟಿಯಾದರು. ನಂತರ ತೀಯಾ ಸಮಾಜದ ಉಳ್ಳಾಲ ಭಗವತಿ ಕ್ಷೇತ್ರ ಸಂದರ್ಭನ, ಸೋಮೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ, ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ದೇವಸ್ಥಾನ ಭೇಟಿ, ಕೊಲ್ಯ ರಾಮ ಮಂದಿರ ಸಂದರ್ಶನ, ಕಾಪಿಕಾಡ್ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ, ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಪ್ರಾರ್ಥನೆ, ಉಳಿಯ ಗಾಣಿಗ ಸಮುದಾಯದ ದೇವಳ ಭೇಟಿ, ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ, ಕೊಂಕಣಿ ಸಮುದಾಯದ ಲಕ್ಷ್ಮೀನರಸಿಂಹ ದೇವಳ ದರ್ಶನ, ಕೋಟೆಪುರ ಜುಮಾ ಮಸೀದಿ ಭೇಟಿ ಮಾಡಿದರು.