ಅಂಗಾರಗುಡ್ಡೆ ಬಳಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ: ದೂರು, ಪ್ರತಿದೂರು
ಮುಲ್ಕಿ, ಮೇ 20: ಅಂಗರಗುಡ್ಡೆ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಪ್ರತಿ ಹಲ್ಲೆ ನಡೆದಿದ್ದು, ದೂರು ಪ್ರತಿ ದೂರು ದಾಖಲಾಗಿದೆ.
ಅಂಗಾರಗುಡ್ಡೆ ಬಳಿಯ ಅಬ್ದುಲ್ರಹಿಮಾನ್ ಮತ್ತಿತರರು ತಮ್ಮ ಬಾಡಿಗೆ ಮನೆಯ ಹೆಂಚಿನ ಮೇಲೆ ತೆಂಗಿನಮರದಿಂದ ಮಡಲು ಹಾಗೂ ತೆಂಗಿನಕಾಯಿ ಮನೆಯ ಮೇಲೆ ಬೀಳುತ್ತದೆ ಎಂದು ವಿಚಾರಿಸಲು ಹೋಗಿ ಕ್ಷುಲ್ಲಕ ಕಾರಣಕ್ಕೆ ಅಲಿಯಮ್ಮ ಹಾಗೂ ಅವರ ಸೊಸೆ ರಷೀರಾ ಎಂಬವರನ್ನು ವಿಚಾರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆಲಿಯಮ್ಮ ಮುಲ್ಕಿ ಠಾಣೆಗೆ ದೂರು ನೀಡಿದ್ದು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ಅಬ್ದುಲ್ ರಹಿಮಾನ್ ಪತ್ನಿ ಆಲಿಮಾ ಬೇಗಂ ಎಂಬವರು ತನ್ನ ಮನೆಗೆ ನೆರೆಮನೆಯ ಆಲಿಯಮ್ಮ ಮತ್ತು ಅವರ ಮಕ್ಕಳಾದ ಹಮೀದ್ ಹಾಗೂ ಇತರರು ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ತಗಾದೆ ತೆಗೆದು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿ ಆಲಿಮಾ ಬೇಗಂ ಮುಲ್ಕಿ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪ್ರತಿದೂರು ದಾಖಲಾಗಿದೆ. ಹಲ್ಲೆಗೊಳಗಾದ ಇಬ್ಬರು ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Next Story