ಮಂಗಳೂರು ಜೈಲಿನಲ್ಲಿ ಕೈದಿಗಳ ಹೊಡೆದಾಟ
ಜಗಳ ಬಿಡಿಸಲು ಮುಂದಾದ ಜೈಲು ಅಧೀಕ್ಷಕರಿಗೆ ಹಲ್ಲೆ
ಮಂಗಳೂರು, ಮೇ 22: ನಗರದ ಕೊಡಿಯಾಲ್ಬೈಲಿನಲ್ಲಿರುವ ಸಬ್ ಜೈಲಿನಲ್ಲಿ ಸೋಮವಾರ ತಡರಾತ್ರಿ ಹೊಡೆದಾಡಿಕೊಳ್ಳುತ್ತಿದ್ದ ಕೈದಿಗಳನ್ನು ಬಿಡಿಸಲು ಮುಂದಾದ ಜೈಲು ಅಧೀಕ್ಷಕ ಪರಮೇಶ್, ವಾರ್ಡನ್ ಮುತ್ತಪ್ಪ, ಜಿ.ರಮೇಶ್ ಅವರಿಗೆ ಹಲ್ಲೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೈಲಿನ ‘1’ನೆ ‘ಎ’ ಬ್ಲಾಕ್ನಲ್ಲಿ ರಾತ್ರಿ ಸುಮಾರು 12:15ಕ್ಕೆ ಜಲಾಲ್ ಮತ್ತು ಇಮ್ತಿಯಾಝ್ ಮತ್ತಿತರರು ಅದ್ಯಾವುದೋ ಕಾರಣಕ್ಕಾಗಿ ಹೊಡೆದಾಡಿಕೊಂಡಿದ್ದರೆನ್ನಲಾಗಿದೆ ಈ ಬಗ್ಗೆ ಮಾಹಿತಿ ಪಡೆದ ಇಬ್ಬರು ವಾರ್ಡನ್ ಜಗಳ ಬಿಡಿಸಲು ಪ್ರಯತ್ನಿಸಿದರಲ್ಲದೆ, ಅಧೀಕ್ಷಕರ ಗಮನಕ್ಕೂ ತಂದರು. ಅದರಂತೆ ಅಧೀಕ್ಷಕರು ತಕ್ಷಣ ಜೈಲಿಗೆ ತೆರಳಿ ಜಗಳ ಬಿಡಿಸಲು ಮುಂದಾದಾಗ ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ಪರಸ್ಪರ ಹೊಡೆದಾಡಿಕೊಂಡು ವಿದ್ಯುತ್ ದೀಪ, ಸಿಸಿಟಿವಿ ಕ್ಯಾಮರಾ ಇತ್ಯಾದಿಗೆ ಹಾನಿ ಎಸಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜೈಲು ಅಧೀಕ್ಷಕ ಪರಮೇಶ್ ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
Next Story