ಯುನಿವೆಫ್ನಿಂದ ರಮಝಾನ್ ಸಿದ್ಧತಾ ಕಾರ್ಯಕ್ರಮ
ಮಂಗಳೂರು, ಮೇ 22: ಯುನಿವೆಫ್ ಕರ್ನಾಟಕ ದ.ಕ. ಘಟಕದ ವತಿಯಿಂದ ರಮಝಾನ್ ಸಿದ್ಧತಾ ಕಾರ್ಯಕ್ರಮವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ನಲ್ಲಿ ಜರಗಿತು.
ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, ರಮಝಾನ್ ಸಂಸ್ಕರಣೆಯ ತಿಂಗಳು. ಮಾನವ ಪ್ರತಿ ಹೆಜ್ಜೆಯಲ್ಲೂ ಪಾಪವೆಸಗುವವನಾಗಿರುತ್ತಾನೆ. ರಮಝಾನ್ ಪಾಪ ಶುದ್ಧೀಕರಿಸುವ ತಿಂಗಳಾಗಿದೆ. ತನ್ನ ಸಂಸ್ಕರಣೆಯ ಜೊತೆ ಸಮಾಜದ ಸಂಸ್ಕರಣೆಯೂ ಇದರ ಮುಖ್ಯ ಉದ್ದೇಶ ಎಂದರು.
ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು. ರಾಜ್ಯ ಸಲಹಾ ಸಮಿತಿಯ ಸದಸ್ಯ ಅಬ್ದುಲ್ಲಾ ಪಾರೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಯು.ಕೆ. ಖಾಲಿದ್ ಮತ್ತು ಜಿಲ್ಲಾಧ್ಯಕ್ಷ ಸೈಫುದ್ದೀನ್ ಉಪಸ್ಥಿತರಿದ್ದರು.
Next Story