ಅಮೆಮಾರ್ ಎಸ್ಕೆಎಸ್ಎಸ್ಎಫ್ ವತಿಯಿಂದ ಪರಿಸರ ಸಂರಕ್ಷಣಾ ದಿನಾಚರಣೆ
ಫರಂಗಿಪೇಟೆ, ಜೂ. 8 : ಎಸ್ಕೆಎಸ್ಎಸ್ಎಫ್ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಮಟ್ಟದ ಪರಿಸರ ಸಂರಕ್ಷಣಾ ದಿನಾಚರಣೆ ಬದ್ರಿಯಾ ಜುಮಾ ಮಸೀದಿ ಅಮೆಮಾರ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೆಮಾರ್ ನಲ್ಲಿ ಗಿಡ ನೆಡುವ ಮೂಲಕ ಜಿಲ್ಲಾ ಇಬಾದ್ ಕನ್ವೀನರ್ ಅಬೂಸ್ವಾಲಿಹ್ ಪೈಝಿ ಚಾಲನೆ ನೀಡಿ, ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು.
ಎಸ್ಕೆಎಸ್ಎಸ್ಎಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ, ಕೇಂದ್ರ ಸಮಿತಿಯ ಸದಸ್ಯ ಬಶೀರ್ ಮಜಲ್, ಜಿಲ್ಲಾ ವಿಖಾಯ ಚೇರ್ ಮ್ಯಾನ್ ಮುಸ್ತಫ ಕಾಂದ್ರೋಡಿ (ಕಟ್ಟದಪಡ್ಪು ), ಬಂಟ್ವಾಳ ವಲಯ ಉಪಾಧ್ಯಕ್ಷ ಅಲ್ತಾಫ್ ಮಿತ್ತಬೈಲು, ಫರಂಗಿಪೇಟೆ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಅಮೆಮಾರ್, ಮಸೀದಿಯ ಸದಸ್ಯರಾದ ಅಬ್ದುಲ್ ಹಮೀದ್, ಅಬ್ದುಲ್ ಖಾದರ್ ಅಮೆಮಾರ್, ನಿಯಾಝ್ ಅಮೆಮಾರ್, ಅಲ್ತಾಫ್ ಪೈಝಿ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಸ್ವಾಗತಿಸಿದರು.
Next Story