ಮಂಗಳೂರು: ಕನಕ ಭವನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ
ಮಂಗಳೂರು, ಜೂ.28: ನಗರದ ಕಾವೂರು ಶಾಂತಿ ನಗರದಲ್ಲಿ ಕುರುಬರ ಸಂಘದಿಂದ ನಿರ್ಮಿಸಲಾಗಿರುವ ಕನಕಭವನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು.
ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ಇಂದು ಬೆಂಗಳೂರಿಗೆ ಹಿಂತಿರುಗುವ ಸಂದರ್ಭ ಕಾವೂರಿನಲ್ಲಿ ಕನಕ ಭವನಕ್ಕೆ ತೆರಳಿ ಕಟ್ಟಡ ವೀಕ್ಷಿಸಿ ಕುರುಬ ಸಮುದಾಯದ ಜನರ ಜತೆ ಮಾತನಾಡಿದರಲ್ಲದೆ, ಸಂಘವು ಇಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಮಾಹಿತಿ ಪಡೆದರು.
ಈ ಸಂದರ್ಭ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಲು ನಿರಾಕರಿಸಿದ ಅವರು, ‘‘ನಾನು ಚಿಕಿತ್ಸೆಗಾಗಿ ಬಂದಿದ್ದೆ. ಅದನ್ನು ಮುಗಿಸಿ ಹೊರಟಿರುವೆ. ಏನಾದರು ಮಾತನಾಡಲಿದ್ದರೆ ನಾನೇ ಕರೆಯುತ್ತೇನೆ’’ ಎಂದು ಹೇಳಿ ಹೊರಟರು.
ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉಪಸ್ಥಿತರಿದ್ದರು.
Next Story