ವ್ಯಕ್ತಿ ನಾಪತ್ತೆ: ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ
ಕೊಲ್ಲೂರು, ಜು.9: ಬೆಳ್ಳಾಲ ಗ್ರಾಮದ ಮೋರ್ಟು ಇಳಿಗದ್ದೆ ಎಂಬಲ್ಲಿ ಜು.8ರಿಂದ ನಾಪತ್ತೆಯಾಗಿರುವ ವ್ಯಕ್ತಿಯೊಬ್ಬರು ತೋಡಿನ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ನಾಪತ್ತೆಯಾದವರನ್ನು ಮೋರ್ಟು ಕುಂಟೋಡಿ ಜೆಡ್ಡು ನಿವಾಸಿ ಗೋವಿಂದ ಪೂಜಾರಿ (46) ಎಂದು ಗುರುತಿಸಲಾಗಿದೆ. ಇವರು ಜು.8ರಂದು ಬೆಳಗ್ಗೆ ಮನೆ ಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಜು.9ರಂದು ಬೆಳಗ್ಗೆ ಮೋರ್ಟು ಇಳಿಗದ್ದೆ ಎಂಬಲ್ಲಿರುವ ತೋಡಿನ ಬದಿಯಲ್ಲಿ ಗೋವಿಂ ಪೂಜಾರಿಯ ಚಪ್ಪಲಿ ಕಂಡು ಬಂದಿದೆ.
ಇವರು ತೋಡಿನಲ್ಲಿ ನಡೆದುಕೊಂಡು ಹೋಗುವಾಗ ವಿಪರೀತ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿರಬಹುದು ಅಥವಾ ಅವರಾಗಿಯೇ ಎಲ್ಲಿಗೋ ಹೋಗಿ ನಾಪತ್ತೆಯಾಗಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story