ಪಾಂಬೂರು ವಿಶೇಷ ಶಾಲಾ ಮಕ್ಕಳ ಕೇಶವಿನ್ಯಾಸ
ಉಡುಪಿ, ಜು.11: ಜಯಕರ್ನಾಟಕ ಸಂಘಟನೆ ವತಿಯಿಂದ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಯ ಮಕ್ಕಳ ಕೇಶವಿನ್ಯಾಸವನ್ನು ಉಡುಪಿ ನಗರ ಅಂಗಡಿ ಮಾಲಕರ ಘಟಕದ ಅಧ್ಯಕ್ಷ ಯಶೋಧರ ಭಂಡಾರಿ ಮೂಲಕ ನೆರವೇರಿಸಲಾಯಿತು.
ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಕೆ.ರಮೇಶ್ ಶೆಟ್ಟಿ ಮಾತನಾಡಿ, ಮಾನಸ ಸಂಸ್ಥೆಗೆ ಮಾತು ಕೊಟ್ಟಂತೆ ಕಳೆದ ಒಂದು ವರ್ಷದಿಂದ ವರ್ಷವಿಡೀ ರಜೆ ಸಂದರ್ಭದಲ್ಲಿ ಮಕ್ಕಳ ಕೇಶವಿನ್ಯಾಸವನ್ನು ಮಾಡಲಾಗಿದೆ. ಇದು ಒಂದು ಜನಮೆಚ್ಚುಗೆಯ ಪುಣ್ಯದ ಕೆಲಸ. ಮುಂದಿನ ಒಂದು ವರ್ಷದ ಅವಧಿಗೂ ಮಕ್ಕಳ ಕೇಶವಿನ್ಯಾಸವನ್ನು ಮುಂದುವರೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಅಣ್ಣಪ್ಪ ಕುಲಾಲ್ ಹೆಬ್ರಿ, ಯಶೋಧರ ಭಂಡಾರಿ, ಉಪಾಧ್ಯಕ್ಷ ಮಾರ್ಕ್ ಡಿಸೋಜ ಬ್ರಹ್ಮಾವರ, ಸಂಘಟನಾ ಕಾರ್ಯದರ್ಶಿ ಕರುಣಾಕರ ಮಾರ್ಪಳ್ಳಿ, ಜಿಲ್ಲಾ ಮಾಧ್ಯಮ ವಕ್ತಾರ ಗಣೇಶ್ರಾಜ್ ಸರಳೇಬೆಟ್ಟು, ಹಾವಂಜೆ ಘಟಕದ ಅಧ್ಯಕ್ಷ ಶಂಕರ ಶೆಟ್ಟಿ, ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಶ್ರೀ ಶಿವರಾಂ ಉದ್ಯಾವರ, ರತ್ನಾಕರ ಮೊಗವೀರ ಹಾವಂಜೆ ಮೊದಲಾದವರು ಉಪಸ್ಥಿತರಿದ್ದರು.
Next Story