ಯುವಕ ನಾಪತ್ತೆ: ಎನ್ಡಿಆರ್ಎಫ್ ಹುಡುಕಾಟ
ಮಂಗಳೂರು, ಜು.11: ರವಿವಾರ ಮೂಡುಶೆಡ್ಡೆ ಡ್ಯಾಂ ಬಳಿ ನೆರೆ ನೀರು ನೋಡಲು ತೆರಳಿದ್ದ ಸುಶಾಂತ್ ಕಾಲು ಜಾರಿ ಫಲ್ಗುಣಿ ನದಿಗೆ ಬಿದ್ದು ನಾಪತ್ತೆಯಾಗಿದ್ದ. ಈ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ನದಿಯಲ್ಲಿ ಹುಡುಕಾಟ ನಡೆಸಿದೆ.
ಕೂಳೂರಿನಿಂದ ತಣ್ಣೀರುಬಾವಿವರೆಗೆ ಎನ್ಡಿಆರ್ಎಫ್ನ ತಂಡವೊಂದು ಕಾರ್ಯಾಚರಣೆ ನಡೆಸಿದ್ದು, ಇನ್ನೊಂದು ತಂಡ ಮೂಡುಶೆಡ್ಡೆ ಡ್ಯಾಂನಲ್ಲಿ ಹುಡುಕಾಟ ನಡೆಸಿದೆ.
Next Story