ಜಿಎಸ್ ಹೆಗಡೆ ಅಜ್ಜೀಬಳ ಪ್ರಶಸ್ತಿ ಪುರಸ್ಕೃತ ಇನಾಯತುಲ್ಲಾ ಗವಾಯಿ ಗೆ ಅಭಿನಂದನೆ
ಭಟ್ಕಳ, ಜು. 17: ಭಟ್ಕಳದ ಸಾಹಿಲ್ ಆನ್ಲೈನ್ ಸುದ್ದಿ ಜಾಲತಾಣದ ಪ್ರಧಾನ ಸಂಪಾದಕ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ ಪುರಸ್ಕೃತ ಇನಾಯತುಲ್ಲಾ ಗವಾಯಿ ಅವರಿಗೆ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ ಪುರಸ್ಕೃತ ಇನಾಯತುಲ್ಲಾ ಗವಾಯಿ ಈ ಪ್ರಶಸ್ತಿಗೆ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವೂ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸಿದ ಅವರು ಈ ಪ್ರಶಸ್ತಿಗೆ ನಾನೋರ್ವ ಭಾಜನನಾಗಿಲ್ಲ ಬದಲಿಗೆ ಸಾಹಿಲ್ ಆನ್ಲೈನ್ ಸುದ್ದಿ ಜಾಲತಾಣದ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಸಮರ್ಪಸುತ್ತಿದ್ದೇನೆ ಎಂದರು.
ಈ ಸಂಧರ್ಭದಲ್ಲಿ ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಉಪಾಧ್ಯಕ್ಷ ಎಮ್.ಆರ್.ಮಾನ್ವಿ, ಕಾರ್ಯದರ್ಶಿ ಭಾಸ್ಕರ ನಾಯ್ಕ ಖಜಾಂಚಿ ಮೋಹನ ನಾಯ್ಕ, ಸದಸ್ಯ ಫಯಾಜ ಮುಲ್ಲಾ, ರಿಜ್ವಾನ್ ಗಂಗಾವಳಿ, ಆರ್. ನಿಸ್ಸಾರ್ ಅಹ್ಮದ್, ಪ್ರಸನ್ನ ಭಟ್ಟ, ಉದಯ ನಾಯ್ಕ ಉಪಸ್ಥಿತರಿದ್ದರು.
Next Story