ಜು.24: ಸಾಲೆತ್ತೂರಿನ ಪಂಜರಕೋಡಿಯಲ್ಲಿ ನವೀಕೃತ ಮಸೀದಿ ಉದ್ಘಾಟನೆ
ಸಾಲೆತ್ತೂರ್,ಜು.19: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪಂಜರಕೋಡಿಯಲ್ಲಿ ಎಪಿ ಉಸ್ತಾದರ ಸಾರಥ್ಯದಲ್ಲಿ ನಿರ್ಮಾಣಗೊಂಡ ನೂತನ ಮಸೀದಿಯ ಉದ್ಘಾಟನಾ ಕಾರ್ಯಕ್ರಮ 2018 ಜುಲೈ 24ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವು ರಿಫಾಯಿಯ್ಯ ಜುಮಾ ಮಸೀದಿ ಪಂಜರಕೋಡಿ ಇದರ ಖತೀಬರಾದ ಅಬೂಬಕ್ಕರ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಮಸೀದಿ ಉದ್ಘಾಟನೆ ಹಾಗೂ ಪ್ರಾರ್ಥನೆ'ಗೆ ನೇತೃತ್ವ ವಹಿಸಲಿದ್ದಾರೆ.
ದಾರುಲ್ ಅಶ್ ಅರಿಯ್ಯಾ ಪ್ರಾಂಶುಪಾಲರಾದ ಶೈಖುನಾ ಪಿಎ ಅಬ್ದುರ್ರಹ್ಮಾನ್ ಬಾಖವಿ ಅಲ್ ಜುನೈದಿ ಉಸ್ತಾದ್ ಮಸೀದಿಯ ವಕ್ಫ್ ನಿರ್ವಹಣೆ ಮತ್ತು ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಕರ್ನಾಟಕ ಸುನ್ನೀ ಜಂಇಯ್ಯತ್ತುಲ್ ಉಲಮಾ ಇದರ ಪ್ರ.ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮೊದಲಾದ ನಾಯಕರುಗಳು ಭಾಗವಹಿಸಲಿರುವರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
Next Story