ಹರೇಕಳ: ಗಾಂಜಾ ಸೇವನೆ ಹಾಗೂ ಸಾಗಾಟ ಆರೋಪಿಗಳ ಬಂಧನ
ಮಹಮ್ಮದ್, ನಿಝಾಮ್, ಅಹ್ಮದ್ ಕಬೀರ್
ಕೊಣಾಜೆ,ಜು.20: ಹರೇಕಳ ಗ್ರಾಮದ ಬಾವಲಿಗುರಿ ಬಸ್ ನಿಲ್ದಾಣದ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾಗೂ ಹರೇಕಳದ ನ್ಯೂಪಡ್ಪು ಬಳಿ ಗಾಂಜಾ ಸೇವನೆ ಮಾಡುತಿದ್ದ ಮತ್ತೊರ್ವ ಆರೋಪಿ ಸೇರಿ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಾವಲಿಗುರಿಯ ಮಹಮ್ಮದ್ ಯಾನೆ ಮಾಮು(42), ನ್ಯೂಪಡ್ಪುವಿನ ಮಹಮ್ಮದ್ ನಿಝಾಮ್(24) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹರೇಕಳ ಗ್ರಾಮದ ನ್ಯೂಪಡ್ಪು ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮಂಜನಾಡಿ ಮಂಗಳಾಂತಿಯ ಅಹ್ಮದ್ ಕಬೀರ್(32) ಎಂಬಾತನನ್ನು ಕೂಡಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊಣಾಜೆ ಠಾಣಾ ಅಧಿಕಾರಿ, ಸಿಬ್ಬಂದಿ ಮತ್ತು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಭಾಗವಹಿಸಿದ್ದರು.
Next Story