ಸೆ.9: ಉಡುಪಿ ಜಾಮೀಯ ಮಸೀದಿಯಲ್ಲಿ ಮೋಹರಂ ಸಂದೇಶ
ಉಡುಪಿ, ಸೆ.5: ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲೆ ಇದರ ವತಿಯಿಂದ ಮೋಹರಂ ಸಂದೇಶ ಕಾರ್ಯಕ್ರಮವು ಸೆ.9ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಜಾಮೀಯ ಮಸೀದಿಯಲ್ಲಿ ನಡೆಯಲಿದೆ.
ಪ್ರವಚನಕಾರರಾಗಿ ಇಂದ್ರಾಳಿ ಮಸೀದಿಯ ವೌಲಾನ ಮಸೀಹುಲ್ಲಾಹ್ ಖಾಸ್ಮಿ, ಉಡುಪಿ ಅಲ್ಇಬಾದ ಇಂಡಿಯನ್ ಸ್ಕೂಲ್ನ ಸಂಚಾಲಕ ಶೇಖ್ ಅಬ್ದುಲ್ಲತೀಫ್ ಮದನಿ, ಕುಕ್ಕಿಕಟ್ಟೆ ಮಸೀದಿಯ ವೌಲಾನ ಹುಸೈನ್ ಅಹ್ಮದ್ ರಶಾದಿ, ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story