ಸೆ.16: ಕೌನ್ಸಿಲರ್ಗಳಿಗೆ ಜೆಡಿಎಸ್ ಅಭಿನಂದನೆ
ಮಂಗಳೂರು, ಸೆ.13: ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಆಯ್ಕೆಗೊಂಡ ಜೆಡಿಎಸ್ ಪಕ್ಷದ ನಾಲ್ವರು ಕೌನ್ಸಿಲರ್ಗಳಿಗೆ ಸೆ.16ರಂದು ಸಂಜೆ 4:30ಕ್ಕೆ ತೊಕ್ಕೋಟು ಗಂಗಾ ಕಾಂಪ್ಲೆಕ್ಸ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮವು ಜರುಗಲಿದೆ.
ಕ್ಷೇತ್ರಾಧ್ಯಕ್ಷ ಮೋಹನದಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ನಾಯಕರಾದ ಅಬೂಬಕರ್ ಹಾಜಿ ನಾಟೆಕಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಉಳ್ಳಾಲ ನಗರ ಜನತಾ ದಳದ ಚುನಾವಣಾ ಸಮಿತಿಯ ಸಂಚಾಲಕ ನಝೀರ್ ಉಳ್ಳಾಲ್ ತಿಳಿಸಿದ್ದಾರೆ.
Next Story