ಹೆಜಮಾಡಿ: ಕರಾವಳಿ ಕಾವಲು ಪಡೆ ಇನ್ಸ್ಪೆಕ್ಟರ್ ನಿಧನ
ಪಡುಬಿದ್ರೆ, ಅ. 3: ಹೆಜಮಾಡಿಯ ಕರಾವಳಿ ಕಾವಲು ಪೊಲೀಸ್ ಪಡೆಯ ಇನ್ಸ್ಪೆಕ್ಟರ್ ಹರೀಶ್ಚಂದ್ರ ಕೆ.ಪಿ. (54) ಹೃದಯಾಘಾತದಿಂದ ಬುಧವಾರ ನಿಧನಹೊಂದಿದರು.
ಎರಡೂವರೆ ವರ್ಷಗಳಿಂದ ಹೆಜಮಾಡಿಯ ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತಿದ್ದರು.
ಇಂದು ಬೆಳಗ್ಗೆ ಅವರ ಮುಲ್ಕಿಯ ಕೊಲ್ನಾಡ್ನ ಸ್ವಗೃಹದಲ್ಲಿ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Next Story