ರೆಡ್ಕ್ರಾಸ್ ಸಭಾಪತಿಯಾಗಿ ರಾಜೀವ್ ಶೆಟ್ಟಿ ಆಯ್ಕೆ
ಉಡುಪಿ, ಎ.3: ಭಾರತೀಯ ರೆಡ್ಕ್ರಾಸ್ ಸಂಸ್ಥೆಯ 2016- 2019ನೆ ಸಾಲಿಗೆ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಯಾಗಿ ಉಡುಪಿಯ ಬಸ್ರೂರು ರಾಜೀವ್ ಶೆಟ್ಟಿ ಮತ್ತು ಉಪಸಭಾಪತಿಯಾಗಿ ಕಲಬುರಗಿ ಅಪ್ಪರಾವ್ ಅಕ್ಕೋಣೆ ಆಯ್ಕೆಯಾಗಿದ್ದಾರೆ.
ರಾಜ್ಯಪಾಲರಿಂದ ನಿಯುಕ್ತಿ ಗೊಂಡ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಸ್ತದ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ತ್ರೈವಾರ್ಷಿಕ ಚುನಾವಣೆಯಲ್ಲಿ ಇವರಿಬ್ಬರು ಆಯ್ಕೆಯಾದರು.
ಈ ಚುನಾವಣೆಯಲ್ಲಿ 30 ಜಿಲ್ಲೆಗಳಿಂದ ಪ್ರತಿನಿಧಿಸಲ್ಪಟ್ಟ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ಆಯ್ಕೆಯಾದ ಆಡಳಿತ ಮಂಡಳಿಯ ಸದಸ್ಯರಿಗೆ ವಸ್ತದ್ ಪ್ರಮಾಣ ವಚನ ಬೋಧಿಸಿದರು.
Next Story