ಕಡಿಯುತ್ತಿದ್ದ ಮರ ಸಮೇತ ಬಿದ್ದು ಮೃತ್ಯು
ಕಾಪು, ಅ.3: ಕಡಿಯುತ್ತಿದ್ದ ತೆಂಗಿನ ಮರ ಸಮೇತ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಮಣಿಪುರ ಗ್ರಾಮದ ಕಲ್ಮಂಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಗಣೇಶ್ (32) ಎಂದು ಗುರುತಿಸಲಾಗಿದೆ.
ಕಲ್ಮಂಜೆಯ ವಿಠಲ ಪೂಜಾರಿ ಎಂಬವರ ಮನೆಯ ತೋಟದ ತೆಂಗಿನ ಮರವನ್ನು ಹತ್ತಿ ಕಡಿಯುತ್ತಿದ್ದು, ಈ ವೇಳೆ ಮರ ಆಕಸ್ಮಿಕವಾಗಿ ಬುಡ ಸಮೇತ ಬಿತ್ತೆನ್ನಲಾಗಿದೆ. ಇದರಿಂದ ಮರದಲ್ಲಿದ್ದ ಗಣೇಶ್ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story