ಯುವಕ ನಾಪತ್ತೆ
ಪಡುಬಿದ್ರಿ, ಅ.9: ನಂದಿಕೂರು ಗ್ರಾಮದ ಚಿಕ್ಕತೋಟ ನಿವಾಸಿ ರಮೇಶ್ ಸುವರ್ಣ ಎಂಬವರ ಮಗ ರಕ್ಷಿತ್(26) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಗುಜರಾತ್ನಲ್ಲಿ ಕೆಲಸ ಮಾಡಿಕೊಂಡಿದ್ದ ರಕ್ಷಿತ್ ಸುಮಾರು ಒಂದು ತಿಂಗಳ ಹಿಂದೆ ಮನೆಗೆ ಬಂದಿದ್ದನು. ಅ.5ರಂದು ಬೆಳಗ್ಗೆ ಅಡ್ವೆಯ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದ ರಕ್ಷಿತ್ ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story