ಉಡುಪಿ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
ವೆಂಕಟೇಶ ನಾಯಕ್
ಉಡುಪಿ, ಅ.13: ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ಹೊರ ಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಕೋಣಿ ವೆಂಕಟೇಶ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ಉಡುಪಿ ಎಲ್.ಐ.ಸಿ. ನೌಕರರ ಸಂಘದ ಕಛೇರಿಯ ಸಬಾಂಗಣ ದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಹರೀಶ್ ಬೈಂದೂರು, ಉದಯ ಪೂಜಾರಿ ಕುಂದಾಪುರ, ಪ್ರಸನ್ನ ಪೆರ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ಗಜಾನನ ಉಡುಪಿ, ಜೊತೆ ಕಾರ್ಯದರ್ಶಿ ಗಳಾಗಿ ಪ್ರೇಮ ಕುಂದಾಪುರ, ಜ್ಯೋತಿ ನಾಯಕ್ ಶಂಕರನಾರಾಯಣ, ಜಯಂತಿ ಕೆ.ಕುಂದಾಪುರ, ಗಿರಿಜಾ ಬೈಂದೂರು, ಪ್ರತಿಮಾ ಶೆಟ್ಟಿ ಬೈಲೂರು, ಸದಸ್ಯರುಗಳಾಗಿ ರವಿಕಲಾ ಕೋಟೇಶ್ವರ, ಗಿರೀಶ ಹವಾಲ್ದಾರ್ ಅಂಬಾಗಿಲು, ರಿತೇಶ ಉಡುಪಿ, ರಮೇಶ ಉಡುಪಿ, ನವೀಶ್ ಆದಿಉಡುಪಿ, ಮಮತ ಕಾರ್ಕಳ, ಲತಾ ನಾಯಕ್ ಮುನಿಯಾಲ, ಸುಮಿತ್ರ ಹೆಬ್ರಿ ಅವರನ್ನು ಸರ್ವಾ ನುಮತದಿಂದ ಆಯ್ಕೆ ಮಾಡಲಾಯಿತು.
Next Story