ಪಣಂಬೂರು ಬೀಚ್: ವಿದ್ಯಾರ್ಥಿ ನೀರುಪಾಲು, ಆತ್ಮಹತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
ಮಂಗಳೂರು, ಅ.13: ಪ್ರತ್ಯೇಕ ಘಟನೆಯಲ್ಲಿ ಪಣಂಬೂರು ಬೀಚ್ನಲ್ಲಿ ಶನಿವಾರ ಓರ್ವ ಕಾಲೇಜು ವಿದ್ಯಾರ್ಥಿ ನೀರುಪಾಲಾಗಿದ್ದು, ಮತ್ತೋರ್ವ ವೃದ್ಧನ ರಕ್ಷಣೆ ಮಾಡಲಾಗಿದೆ.
ಬೆಳ್ತಂಗಡಿ ಗೇರುಕಟ್ಟೆ ನಿವಾಸಿ ಕೇಶವ ಎಂಬವರ ಪುತ್ರ ಸುಧಾರಾಜ್ (18) ನೀರುಪಾಲಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯ ಸರಕಾರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸುಧಾರಾಜ್ ತಮ್ಮ 10 ಮಂದಿ ಸ್ನೇಹಿತರೊಂದಿಗೆ ಪಣಂಬೂರು ಬೀಚ್ಗೆ ಬಂದಿದ್ದರು. ಬೀಚ್ನಲ್ಲಿ ಕಬಡ್ಡಿ ಆಡಿ, ಬಳಿಕ ತಮ್ಮ ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ ಅವರು ನಾಪತ್ತೆಯಾಗಿದ್ದು, ಈವರೆಗೆ ಪತ್ತೆಯಾಗಿಲ್ಲ.
ಇನ್ನೊಂದು ಘಟನೆಯಲ್ಲಿ ಮಲ್ಲೇದೇವರು(69) ಎಂಬವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಪಣಂಬೂರು ಬೀಚ್ನ ಜೀವರಕ್ಷಕ ದಳದವರು ಅವರನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story