ಬೆಳ್ತಂಗಡಿ: ಎಸ್ಕೆಎಸ್ಸೆಸ್ಸೆಫ್ನಿಂದ ಕೌನ್ಸಿಲ್ ಸಭೆ, ಕ್ಯಾಂಪೇನ್ ಉದ್ಘಾಟನೆ
ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಯಾಕೂಬ್ ಮಾಸ್ಟರ್ ರಿಗೆ ಸನ್ಮಾನ
ಮಂಗಳೂರು, ಅ.15: ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯದಿಂದ ಕೌನ್ಸಿಲ್ ಸಭೆ ಮತ್ತು ಕ್ಯಾಂಪಸ್ ವಿಂಗ್ ಬಿಸ್ಮಿಲ್ಲಾಹ್ ಕ್ಯಾಂಪೇನ್ ಉದ್ಘಾಟನಾ ಸಭೆಯು ದಾರುಸ್ಸಲಾಂ ಕಾಲೇಜಿನಲ್ಲಿ ನಡೆಯಿತು.
ಸಭೆಯನ್ನು ವಲಯ ಕೋಶಾಧಿಕಾರಿ ಶಂಸುದ್ದೀನ್ ದಾರಿಮಿ ಉದ್ಘಾಟಿಸಿದರು. ಮಂಗಳೂರು ಕೇಂದ್ರ ಜುಮಾ ಮಸೀದಿ ಖತೀಬ್ ಸ್ವದಖತುಲ್ಲಾಹ್ ಫೈಝಿ ಉಸ್ತಾದ್ ಮುಖ್ಯ ಭಾಷಣಗೈದರು.
ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಯಾಕೂಬ್ ಮಾಸ್ಟರ್ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ವಹಿಸಿದ್ದರು.
ಸಭೆಯಲ್ಲಿ ಬೆಳ್ತಂಗಡಿ ಕ್ಲಷ್ಟರ್ ಅಧ್ಯಕ್ಷ ರಝಾಕ್ ಮುಸ್ಲಿಯಾರ್ ಗೇರುಕಟ್ಟೆ, ವಲಯ ಉಪಾಧ್ಯಕ್ಷ ಬಶೀರ್ ದಾರಿಮಿ, ಮಡಂತ್ಯಾರ್ ಕ್ಲಷ್ಟರ್ ಅಧ್ಯಕ್ಷ ಹಕೀಂ ಬಂಗೇರುಕಟ್ಟೆ, ದಾರುಸ್ಸಲಾಮಿನ ಇಸ್ಹಾಖ್ ಕೌಸರಿ, ವಲಯ ವಿಖಾಯ ಚೇರ್ಮನ್ ಮ್ಯಾನ್ ಶೌಕತ್ ಅಲಿ ಬೆಳ್ತಂಗಡಿ, ವಲಯ ಟ್ರೆಂಡ್ ಕಾರ್ಯದರ್ಶಿ ತೌಸೀಫ್ ಮಾಸ್ಟರ್ ಪಾಂಡವರಕಲ್ಲು, ಕ್ಯಾಂಪಸ್ ಕಾರ್ಯದರ್ಶಿ ಝೈದ್ ಕಾಜೂರು, ಬಶೀರ್ ಬಳ್ಳಮಂಜ, ಅಬ್ಬಾಸ್ ಚಾರ್ಮಾಡಿ, ರಫೀಕ್ ಮಂಗಳ, ಇಲ್ಯಾಸ್ ಅಝ್ಹರಿ, ಅಬ್ದುಲ್ಲಾ ಪುಂಜಾಲಕಟ್ಟೆ, ಸ್ವದಖತುಲ್ಲಾ ದಾರಿಮಿ ಕಕ್ಕಿಂಜೆ, ಹಮೀದ್ ಮುಸ್ಲಿಯಾರ್ ಸೋಮಂತಡ್ಕ, ಮುನೀರ್ ನೆಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ರಿಯಾಝ್ ಫೈಝಿ ಕಕ್ಕಿಂಜೆ ಸ್ವಾಗತಿಸಿದರು. ಸಿರಾಜ್ ಚಿಲಿಂಬಿ ವಂದಿಸಿದರು.