ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು
ಕೋಟ, ಅ.16: ಗಿಳಿಯಾರು ಗ್ರಾಮದ ಕೋಟ ಬಸ್ ನಿಲ್ದಾಣ ಬಳಿಯ ಪೈ ಕಾಂಪ್ಲೆಕ್ಸ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬಸ್ಸಿಗಾಗಿ ರಸ್ತೆ ಬದಿ ನಿಂತು ಕಾಯುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ನಾರಾಯಣ ಮರಕಾಲ ಎಂದು ಗುರುತಿಸಲಾಗಿದೆ. ಈ ಅಪ ಘಾತದಲ್ಲಿ ಬೈಕ್ ಸವಾರ ರಾಘವೇಂದ್ರ ದೇವಾಡಿಗ ಹಾಗೂ ಹಿಂಬದಿಯಲ್ಲಿದ್ದ ಅನಿತಾ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ.
ಅ.15ರಂದು ಸಂಜೆ 7:30ರ ಸುಮಾರಿಗೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಬಸ್ಸಿಗಾಗಿ ಕಾಯುತ್ತಿದ್ದ ನಾರಾಯಣ ಮರಕಾಲರಿಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ನಾರಾಯಣ ಮರಕಾಲ ಹಾಗೂ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದರೆನ್ನಲಾಗಿದೆ. ಇವರಲ್ಲಿ ಗಂಭೀರ ಗಾಯಗೊಂಡ ನಾರಾಯಣ ಮರಕಾಲ ಚಿಕಿತ್ಸೆ ಫಲಕಾರಿಯಾಗದೆ ಅ.16ರಂದು ಬೆಳಗಿನ ಜಾವ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story